Advertisement

ಜಮ್ಮು-ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ

11:15 AM Feb 27, 2020 | sudhir |

ಜಿನೆವಾ: ಜಮ್ಮು-ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ಪಶ್ಚಿಮ ವಿಭಾಗದ ಕಾರ್ಯದರ್ಶಿ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ. ಪಾಕಿಸ್ತಾನದ ಮಾನವ ಹಕ್ಕು ಸಚಿವ, ಕಾಶ್ಮೀರ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ವಿಶ್ವಸಂಸ್ಥೆಯ 43ನೇ ಮಾನವಹಕ್ಕುಗಳ ಅಧಿವೇಶನದಲ್ಲಿ ಒತ್ತಾಯಿಸಿದ ಬೆನ್ನಲ್ಲೇ ಸ್ವರೂಪ್‌ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಪಾಕಿಸ್ತಾನದ ವಿರುದ್ಧ ವಾಗ್ಧಾಳಿ ನಡೆಸಿದ ಸ್ವರೂಪ್‌, ಪಾಕಿಸ್ತಾನ ವಿಶ್ವದಲ್ಲೇ ಭಯೋತ್ಪಾದನೆ ಮತ್ತು ಹಿಂಸೆಯನ್ನು ರಫ್ತು ಮಾಡುವ ಅಗ್ರರಾಷ್ಟ್ರ ಎನಿಸಿಕೊಂಡಿದೆ. ಅದು ಬೇರೆಯವರಿಗೆ ಉಪದೇಶ ಮಾಡುವುದನ್ನು ಬಿಟ್ಟು ತನ್ನ ಪರಿಸ್ಥಿತಿ ಅದರಲ್ಲೂ ತನ್ನ ದೇಶದ ಅಲ್ಪಸಂಖ್ಯಾತರ ಪರಿಸ್ಥಿತಿಯನ್ನು ಮೊದಲು ಸುಧಾರಿಸಬೇಕು ಎಂದಿದ್ದಾರೆ.

ಜಮ್ಮು ಕಾಶ್ಮೀರವನ್ನು ವಿಭಜಿಸಿ ಕೇಂದ್ರಾಡಳಿತ ಪ್ರದೇಶ ಮಾಡಿರುವುದು ಭಾರತದ ಆಂತರಿಕ ವಿಚಾರ. ಸದ್ಯ ಜಮ್ಮು ಕಾಶ್ಮೀರದ ಮೇಲೆ ಹೇರಿರುವ ಎಲ್ಲ ನಿರ್ಬಂಧಗಳು ತಾತ್ಕಾಲಿಕ ಈಗಾಗಲೇ ಪರಿಸ್ಥಿತಿ ಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ಸ್ವರೂಪ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next