Advertisement

Breaking news : ಜಮೀನು ಜಗಳ : ಜಮಖಂಡಿಯಲ್ಲಿ ನಾಲ್ವರ ಸಹೋದರರ ಬರ್ಬರ ಹತ್ಯೆ

09:26 PM Aug 28, 2021 | Team Udayavani |

ಜಮಖಂಡಿ: ಆಸ್ತಿ ವ್ಯಾಜ್ಯದ ಸಲುವಾಗಿ ನಾಲ್ವರ ಸಹೋದರರ ಬರ್ಬರ ಹತ್ಯೆ ನಡೆದಿರುವಂತಹ ಬೆಚ್ಚಿ ಬೀಳಿಸುವ ಘಟನೆ ತಾಲ್ಲೂಕಿನ ಮಧುರಖಂಡಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಮುದರಡ್ಡಿ ಮತ್ತು ಪುಠಾಣಿ ಮನೆತನದ ನಡುವೆ ಆಸ್ತಿ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಪುಠಾಣಿ ಮನೆತನದವರು ಮುದರಡ್ಡಿ ಮನೆತನದ ನಾಲ್ಕು ಜನ ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಹಣಮಂತ ಮುದರಡ್ಡಿ (45), ಬಸವರಾಜ ಮುದರಡ್ಡಿ (37), ಈಶ್ವರ ಮುದರಡ್ಡಿ (35) ಮತ್ತು ಮಲ್ಲು ಮುದರಡ್ಡಿ (33) ಕೊಲೆಯಾದ ಸಹೋದರರು.

ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಸಣ್ಣೆರಿ ರಸ್ತೆಯ ತೋಟದ ವಸ್ತಿಯಲ್ಲಿ ಈ ಘಟನೆ ನಡೆದಿದ್ದು, ಹಲವಾರು ವರ್ಷಗಳಿಂದ ಈ‌ ಎರಡು ‌ಮನೆತನದ ನಡುವೆ ಆಸ್ತಿ ಸಲುವಾಗಿ ಜಗಳಗಳು ಇತ್ತು. ಪುರಾಣಿ ಮನೆತನದವರು ಹೊರಗಿನವರನ್ನು ಕರೆಸಿ ಕೊಲೆ ಮಾಡಿಸಿರುವದಾಗಿ ಮೇಲ್ನೋಟಕ್ಕೆ ಕಂಡು‌ಬಂದಿದೆ, ಈ ಬಗ್ಗೆ ಜಮಖಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಮಾಡುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next