Advertisement
ಗ್ರಾಮದ ಮುದರಡ್ಡಿ ಹಾಗೂ ಪುಟಾಣಿ ಎರಡು ಕುಟುಂಬದ ನಡುವೆ ಕೆಲವು ವರ್ಷಗಳಿಂದ ಖರೀದಿ ಆಸ್ತಿ ಕಲಹವಿದ್ದು,ಗ್ರಾಮದ ಹಿರಿಯರ ನಡುವೆ ಹಲವಾರು ಸಲ ಸಂಧಾನ ವಿಫಲಗೊಂಡ ಹಿನ್ನೆಲೆಯಲ್ಲಿ ವಿವಾದ ನಗರದ ಸಿವಿಲ್ ಕೋರ್ಟ್ನಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ಕುಟುಂಬಗಳ ನಡುವಿನ ವೈಮನಸು ವಿಕೋಪಕ್ಕೆ ತಲುಪಿದ ಹಿನ್ನೆಲೆಯಲ್ಲಿ ಮುದರಡ್ಡಿ ಕುಟುಂಬದ ನಾಲ್ವರನ್ನು ಪುಟಾಣಿ ಕುಟುಂಬದವರು ಕೊಲೆ ಮಾಡಿದ್ದಾರೆ ಮಾತುಗಳು ಕೇಳಿ ಬಂದಿವೆ.
Related Articles
Advertisement
ಬಾಡಿಗೆ ಹಂತಕರ ಬಳಕೆ: ತಾಲೂಕಿನ ಮಧುರಖಂಡಿ ಗ್ರಾಮದ ಮುದರಡ್ಡಿ ಕುಟುಂಬದವರನ್ನು ಹತ್ಯೆ ಮಾಡಲು ಮಹಾರಾಷ್ಟ್ರದಿಂದ ಕೆಲವು ಬಾಡಿಗೆ ಹಂತಕರನ್ನು ಕರೆಸಿಕೊಂಡು ಬಂದಿದ್ದರು ಎನ್ನಲಾಗಿದೆ. ವಿವಿಧ ಮಾರಕಾಸ್ತ್ರ ಗಳೊಂದಿಗೆ ಆಗಮಿಸಿದ್ದ ಹಂತಕರು ಇಬ್ಬರು ಸಹೋದರರು ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಅವರೊಂದಿಗೆ ಗಲಾಟೆ ಮಾಡಿದ್ದಾರೆ. ಮುದರಡ್ಡಿ ಸಹೋದರರು ತಮ್ಮ ಇನ್ನಿಬ್ಬರ ಸಹೋದರರಿಗೆ ಫೋನ್ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ. ಆ ಇಬ್ಬರು ಸಹೋದರರು ಸ್ಥಳಕ್ಕೆ ಆಗಮಿಸುವ ಮುಂಚೆ ಬಾಡಿಗೆ ಹಂತಕರು ಈ ಇಬ್ಬರನ್ನು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಆಗಿಮಿಸಿದ ಮತ್ತೇ ಇಬ್ಬರು ಸಹೋದರರನ್ನು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.