Advertisement

ಉಗ್ರ ಭಟ್ಕಳ್‌ ವಿರುದ್ಧ ಆರೋಪ ನಿಗದಿಗೆ ಆದೇಶ

07:00 AM Aug 02, 2017 | Team Udayavani |

ಹೊಸದಿಲ್ಲಿ: ಜಾಮಾ ಮಸೀದಿ ಸ್ಫೋಟ ಪ್ರಕರಣ ಸಂಬಂಧ ಇಂಡಿಯನ್‌ ಮುಜಾಹಿದೀನ್‌ ಸಹ ಸಂಸ್ಥಾಪಕ ಯಾಸೀನ್‌ ಭಟ್ಕಳ್‌ ಮತ್ತು ಇತರ 10 ಮಂದಿ ಉಗ್ರರ ವಿರುದ್ಧ ಆರೋಪ ನಿಗದಿಮಾಡುವಂತೆ ಪೊಲೀಸರಿಗೆ ದಿಲ್ಲಿ ನ್ಯಾಯಾಲಯ ಸೂಚಿಸಿದೆ. ಇದೇ ವೇಳೆ, ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ. 2010ರ ಸೆ. 19ರಂದು ವಿದೇಶಿ ಪ್ರವಾಸಿಗರು ಬಂದಿಳಿದ ಬಸ್‌ ಮೇಲೆ ಗುಂಡಿನ ದಾಳಿ ನಡೆಸಿದ ಮರುಕ್ಷಣವೇ ಮಸೀದಿಯಲ್ಲಿ ಬಾಂಬ್‌ ಸ್ಫೋಟಗೊಂಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next