Advertisement

ಜಲವಳ್ಳಿ ಯಕ್ಷಯಾನ 30: ಸಂಭ್ರಮ, ಸಮ್ಮಾನ

11:13 PM Aug 06, 2023 | Team Udayavani |

ಉಡುಪಿ: ಜಲವಳ್ಳಿ ವಿದ್ಯಾಧರ ರಾವ್‌ ಅಭಿಮಾನಿ ಬಳಗ ಉಡುಪಿ ವತಿಯಿಂದ ಅಜ್ಜರಕಾಡು ಪುರಭವನದಲ್ಲಿ ರವಿವಾರ ಜಲವಳ್ಳಿ ಅವರ ಸಾರ್ಥಕ ಮೂರು ದಶಕಗಳ ಕಲಾಸೇವೆಯ ಸಂಭ್ರಮ, ಸಮ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಜಲವಳ್ಳಿ ಯಕ್ಷಯಾನ-30 ಕಾರ್ಯಕ್ರಮ ನಡೆಯಿತು.

Advertisement

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಉದ್ಘಾಟನೆ ನೆರವೇರಿಸಿ ಯಕ್ಷಗಾನ ಕಲೆ ಸ್ವತ್ಛ ಕನ್ನಡ ಭಾಷೆ ಉಳಿವಿಗೆ ಪೂರಕವಾಗಿದ್ದು, ಕಲಾವಿದನಿಗೆ ಭಾಷೆಯ ಮೇಲಿದ್ದ ಹಿಡಿತ ಅಸಾಧಾರಣ. ಆಧುನಿಕ ಭರಾಟೆಯಲ್ಲಿ ಯಕ್ಷಗಾನ ಕಲೆ ನಶಿಸಿ ಹೋಗುತ್ತಿದೆ ಎನ್ನುವ ಭೀತಿಯ ಹೊತ್ತಿಗೆ ಯುವ ಸಮುದಾಯ ಹಿರಿಯ ಮಾರ್ಗದರ್ಶನದೊಂದಿಗೆ ಈ ಕಲೆಯನ್ನು ಉಳಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು. ಜಲವಳ್ಳಿ ವಿದ್ಯಾಧರ ರಾವ್‌ ಕಲಾ ಸೇವೆಯನ್ನು ಕೊಂಡಾಡಿದರು.

ಶಾಸಕ ಯಶ್‌ಪಾಲ್‌ ಎ. ಸುವರ್ಣ ಜಲವಳ್ಳಿ ವಿದ್ಯಾಧರ ರಾವ್‌ ಅವರ ಯಕ್ಷಗಾನ ಕಲಾ ಸೇವೆಯನ್ನು ಶ್ಲಾಘಿಸಿ, ಅಭಿನಂದಿಸಿದರು. ವಿ| ದತ್ತಮೂರ್ತಿ ಭಟ್‌, ಶಿವಮೊಗ್ಗ ಮಾತನಾಡಿದರು. ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನದ ಧರ್ಮ ದರ್ಶಿ ರಮಾನಂದ ಗುರೂಜಿ, ಮಾಹೆ ಸಹಕುಲಾ ಪತಿ ಡಾ| ಎಚ್‌.ಎಸ್‌. ಬಲ್ಲಾಳ್‌, ಉದ್ಯಮಿಗಳಾದ ಶಾಂತಾರಾಮ ಶೆಟ್ಟಿ ಬಾರಕೂರು, ಪುರುಷೋತ್ತಮ ಶೆಟ್ಟಿ, ಬ್ರಹ್ಮಾವರ ವಿಎಸ್‌ಎಸ್‌ ಸಂಘದ ನಿರ್ದೇಶಕ ಬಿರ್ತಿ ರಾಜೇಶ ಶೆಟ್ಟಿ, ಕೃಷ್ಣಮೂರ್ತಿ ಮಂಜ ಮಾರಣಕಟ್ಟೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next