Advertisement

Baba Siddique ಪ್ರಕರಣಕ್ಕೆ ಜಲಂಧರ್ ನಂಟು: 4ನೇ ಆರೋಪಿ ಜೀಶನ್ ಅಖ್ತರ್

10:20 PM Oct 13, 2024 | Team Udayavani |

ಮುಂಬಯಿ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, ನಾಲ್ಕನೇ ಆರೋಪಿ ಮೊಹಮ್ಮದ್ ಜೀಶನ್ ಅಖ್ತರ್‌ ಎಂಬಾತನನ್ನು ಗುರುತಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Advertisement

ಕೊಲೆ ಪ್ರಕರಣದ ನಂಟು ಜಲಂಧರ್‌ನಲ್ಲಿ ಹೊರಹೊಮ್ಮಿದ್ದು, ಪಂಜಾಬ್‌ನ ನಾಕೋಡರ್‌ನ ಶಾಕರ್ ಗ್ರಾಮದ ಮೊಹಮ್ಮದ್ ಜೀಶನ್ ಅಖ್ತರ್ ಎಂದು ಗುರುತಿಸಲಾದ ನಾಲ್ಕನೇ ಆರೋಪಿ ಭಾಗಿಯಾಗಿದ್ದಾನೆ ಎಂದು ವರದಿಗಳು ಸೂಚಿಸಿವೆ. ಪೊಲೀಸರ ಪ್ರಕಾರ, ಅಖ್ತರ್‌ನನ್ನು 2022 ರಲ್ಲಿ ಜಲಂಧರ್ ಗ್ರಾಮಾಂತರ ಪೊಲೀಸರು ಸಂಘಟಿತ ಅಪರಾಧ, ಕೊಲೆ ಮತ್ತು ದರೋಡೆ ಪ್ರಕರಣದಲ್ಲಿ ಬಂಧಿಸಿದ್ದರು. ಅಖ್ತರ್ ಹೊರಗಿನಿಂದ ಮೂವರು ಶೂಟರ್‌ಗಳನ್ನು ನಿರ್ದೇಶನ ನೀಡುತ್ತಿದ್ದ ಎಂದು ಹೇಳಲಾಗಿದೆ.

ಹತ್ಯೆಯನ್ನು ಮೂವರು ಶೂಟರ್‌ಗಳು ನಡೆಸಿದ್ದು, ಆ ಪೈಕಿ ಒಬ್ಬನಾದ ಗುರ್ಮೆಲ್ ಸಿಂಗ್ ಹರಿಯಾಣದ ಕೈತಾಲ್ ಜಿಲ್ಲೆಯ ನಾರದ ಗ್ರಾಮದವನು . ಉಳಿದ ಇಬ್ಬರು ಶೂಟರ್‌ಗಳು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯವರು. ಗುರ್ಮೆಲ್ ಮತ್ತು ಇನ್ನೊಬ್ಬ ಶೂಟರ್ ಧರ್ಮರಾಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಮೂರನೇ ಶೂಟರ್ ಶಿವಕುಮಾರ್ ತಲೆಮರೆಸಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next