Advertisement

Karnataka Govt; ತೀರ್ಥಹಳ್ಳಿಗೆ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್‌ ನೇಮಕ!

05:21 PM Oct 31, 2023 | Shreeram Nayak |

ತೀರ್ಥಹಳ್ಳಿ: ತೀರ್ಥಹಳ್ಳಿ ನೂತನ ತಹಶೀಲ್ದಾರ್ ಆಗಿ ಜಕ್ಕಣ್ಣ ಗೌಡರ್‌ ಅವರನ್ನು ಸರ್ಕಾರ ನಿಯೋಜನೆ ಮಾಡಿ ಆದೇಶವನ್ನು ಹೊರಡಿಸಿದೆ.

Advertisement

ತೀರ್ಥಹಳ್ಳಿಯಲ್ಲಿ ಹಂಗಾಮಿ ತಹಶೀಲ್ದಾರರಾಗಿ ಇದುವರೆಗೆ ಲಿಂಗರಾಜು ಅವರು ಕೆಲಸ ಮಾಡುತ್ತಿದ್ದರು. ಈಗ ಜಕ್ಕಣ್ಣಗೌಡರ್‌ ನೇಮಕದಿಂದಾಗಿ ತಾಲೂಕು ಆಡಳಿತಕ್ಕೆ ಚುರುಕು ಸಿಗಬಹುದೇ ಎಂಬ ನಿರೀಕ್ಷೆ ಮೂಡಿದೆ.

ತೀರ್ಥಹಳ್ಳಿ ತಹಶೀಲ್ದಾರರಾಗಿ ಇತ್ತೀಚಿಗೆ ಅಮೃತ್ ಅತ್ರೆಶ್ ಅವರು ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಬಳಿಕ ಈ ಸ್ಥಾನ ಖಾಲಿ ಇದ್ದು ಹಂಗಾಮಿ ತಹಶೀಲ್ದಾರರಾಗಿಲಿಂಗರಾಜು ಅವರು ಕೆಲಸ ಮಾಡುತ್ತಾ ಇದ್ದರು.ಇದೀಗ ಜಕಣ್ಣಗೌಡರ್‌ ಅವರನ್ನ ಸರ್ಕಾರ ನೇಮಕ ಮಾಡಿ ಆದೇಶವನ್ನು ಹೊರಡಿಸಿದೆ.

ತಾಲೂಕು ಕಚೇರಿಯಲ್ಲಿ ಲಂಚ ಹಾಗೂ ಇತರೆ ಸೇರಿದಂತೆ ದಾಖಲೆಗಳ ಸಮಸ್ಯೆ ಇದೆ. ರೈತರು ಮತ್ತು ಜನರ ದಾಖಲೆಗಳು ಬೇಗ ಸಿಗಬೇಕು, ಜನರ ಕೆಲಸ ಪೂರ್ಣಗೊಳಿಸುತ್ತಿಲ್ಲ ಎನ್ನುವ ದೂರುಗಳು ಇವೆ. ಈ ಹಿನ್ನಲೆಯಲ್ಲಿ ಜಕ್ಕಣ್ಣ ಗೌಡರ್ ಅವರ ಆಗಮನ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next