Advertisement

ವಿರೋಧಿಗಳಿಗೆ ಜೇಟ್ಲಿ ತಿರುಗೇಟು

12:30 AM Jan 18, 2019 | |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಟೀಕಿಸುವವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿರುವ ವಿತ್ತ ಸಚಿವ ಅರುಣ್‌ ಜೇಟ್ಲಿ, ದೇಶದ ಹಿತಾಸಕ್ತಿಯ ವಿಚಾರವಿದ್ದರೂ ವಿರೋಧಿ ಗಳು ಸುಳ್ಳನ್ನು ಹೊಸೆಯುತ್ತಿದ್ದಾರೆ. ಭ್ರಷ್ಟಾಚಾರ ನಡೆಸುವವರನ್ನು ಅವರ ಕ್ರಾಂತಿಕಾರರು ಎಂದು ಹೊಗಳುತ್ತಾರೆ. ಅವರಿಗೆ ಸೂಕ್ತವಾದ ಸನ್ನಿವೇಶ ದಲ್ಲೆಲ್ಲ ನಿಲುವನ್ನು ಬದಲಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ. 

Advertisement

ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಜೇಟ್ಲಿ, ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಸುದೀರ್ಘ‌ ಪೋಸ್ಟ್‌ ಪ್ರಕಟಿಸಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ.10 ಮೀಸಲಾತಿ ನೀಡುವ ವಿಚಾರದಲ್ಲಿ ರಾಜಕೀಯ ಪಕ್ಷಗಳು ನಡೆಸಿರುವ ವಾಗ್ಧಾಳಿಯನ್ನು ಅವರು ಉಲ್ಲೇಖೀಸಿದರು. ಅಷ್ಟೇ ಅಲ್ಲ, ದೇಶದ ಹಿತಾಸಕ್ತಿಯ ವಿರುದ್ಧ ರಫೇಲ್‌  ಖರೀದಿ ಒಪ್ಪಂದದ ವಿವಾದ ಎಬ್ಬಿಸಿದರು ಎಂದೂ ಟೀಕಿಸಿದ್ದಾರೆ. ರಾಜಕೀಯ ವಲಯದಲ್ಲಿ ಕೆಲವರು ಆಳಲೆಂದೇ ಬಂದವರಿದ್ದಾರೆ, ಇನ್ನೂ ಕೆಲವರು ಎಡಪಂಥೀಯರು ಮತ್ತು ಇನ್ನು ಕೆಲವರು ತೀವ್ರ ಎಡಪಂಥೀಯರಿದ್ದಾರೆ ಎಂದೂ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next