Advertisement

ಇದು ಸೆಮಿಫೈನಲ್‌ -2024ಕ್ಕೆ ನಡೆಯೋದು ಫೈನಲ್‌: ಶೆಟ್ಟರ

09:51 AM May 03, 2023 | Team Udayavani |

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಲ್ಲಿನ ಹೊಸೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ತೊರೆದು ಅನೇಕರು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದರು.

Advertisement

ಬಿಜೆಪಿಯ ದೇವೇಂದ್ರ ಹರಿವಾಣ ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ, ಅನೇಕರು ಪಕ್ಷ ಸೇರ³ಡೆಗೊಳ್ಳುತ್ತಿರುವುದು ಪಕ್ಷ ಬಲವರ್ಧನೆಗೆ ಸಹಕಾರಿಯಾಗುತ್ತಿದೆ. ಬಿಜೆಪಿಯಲ್ಲಿ ಸ್ವಾಭಿಮಾನ, ಗೌರವಕ್ಕೆ ಧಕ್ಕೆಯುಂಟು ಮಾಡುವ ಯತ್ನಗಳು ನಡೆಯುತ್ತಿದ್ದು, ಅಲ್ಲಿನ ಅನೇಕರು ಪಕ್ಷ ತೊರೆಯುವಂತಾಗಿದೆ ಎಂದರು.

ವಿಧಾನಸಭೆ ಚುನಾವಣೆ ಸೆಮಿಫೈನಲ್‌ ಪಂದ್ಯ ಇದ್ದಂತೆ. 2024ರಲ್ಲಿ ಫೈನಲ್‌ ಪಂದ್ಯ ನಡೆಯಲಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ವಿರುದ್ಧ ವಾಗ್ಧಾಳಿ ನಡೆಸಿದರು. ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗೆ ತಮಗೆ ಆಶೀರ್ವದಿಸುವಂತೆ ಕೋರಿದರು.

ಮುಖಂಡರಾದ ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ, ಸತೀಶ ಮೆಹರವಾಡೆ, ಮಂಜುನಾಥ ಕುನ್ನೂರು, ಸದಾನಂದ ಡಂಗನವರ, ಎಂ.ಎಂ. ಗೌಡರ, ಪ್ರಭು ಹಿರೇಕೆರೂರು, ಅಲ್ತಾಫ್‌ ಕಿತ್ತೂರು, ಬಸವರಾಜ ಗುರಿಕಾರ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಮಂಜುನಾಥ ದಲಭಂಜನ, ಮಂಜುನಾಥ ಉಳ್ಳಾಗಡ್ಡಿ, ಅನಿಲ ಬೇವಿನಕಟ್ಟೆ, ಫಾರೂಕ್‌ ಅಬ್ಬುನವರ, ಗುರುನಾಥ ಉಳ್ಳಿಕಾಶಿ, ಬಾಷಾಸಾಬ್‌ ಟಾಕೀವಾಲೆ, ನವೀದ್‌ ಮುಲ್ಲಾ, ಪುಷ್ಪರಾಜ ಹಳ್ಳಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next