Advertisement

ರೈತನಿಂದ ಕ್ಯಾರೆಟ್‌-ಎಲೆಕೋಸು ನಾಶ

11:29 AM May 17, 2020 | Team Udayavani |

ಜಗಳೂರು: ಲಾಕ್‌ಡೌನ್‌ನಿಂದ ಸೂಕ್ತ ಬೆಲೆ ದೊರೆಯದೆ ಬೇಸತ್ತ ರೈತನೊಬ್ಬ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಕ್ಯಾರೆಟ್‌ ಹಾಗೂ ಎಲೆಕೋಸು ಬೆಳೆಗಳನ್ನು ನೆಲಸಮ ಮಾಡಿದ್ದಾನೆ.

Advertisement

ಬೈರನಾಯಕನಹಳ್ಳಿ ಗ್ರಾಮದ ಚೌಡಪ್ಪ ಎಂಬುವರು ನೀರಾವರಿ ಆಶ್ರಯದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಕ್ಯಾರೆಟ್‌-ಎಲೆಕೋಸು ಬೆಳೆದಿದ್ದರು. ಉತ್ತಮ ಇಳುವರಿಯೂ ಬಂದಿತ್ತು. ಹೊಸಪೇಟೆ, ಕೋಲಾರ ಸೇರಿದಂತೆ ವಿವಿಧ ಮಾರುಕಟ್ಟೆಗೆ ಕೊಂಡೊಯ್ದರೂ ಖರೀದಿಸುವವರು ಇಲ್ಲದ್ದರಿಂದ ನಷ್ಟ ಉಂಟಾಗಿತ್ತು. ಇದರಿಂದ ಬೇಸರಗೊಂಡ ಚೌಡಪ್ಪ ಕೊಯ್ಲು ಮಾಡದೆ ಉಳಿದ ಫಸಲನ್ನು ನೆಲದಲ್ಲೇ ಉಳಿಸಿ ಟ್ರ್ಯಾಕ್ಟರ್‌ ಮೂಲಕ ಕಿತ್ತು ಹಾಕಿಸುತ್ತಿದ್ದಾರೆ.

ಎಲೆಕೋಸು, ಕ್ಯಾರೆಟ್‌, ತರಕಾರಿ ಬೆಳೆಯಲು 70 ಸಾವಿರ ರೂ. ಖರ್ಚು ಮಾಡಿದ್ದು, ಮಾರಲು ಹೋದರೆ ಕೆಜಿಗೆ 4-5 ರೂ.ಗೆ ಕೇಳುತ್ತಿದ್ದಾರೆ. ಹಾಗಾಗಿ ಬೆಳೆಗಳನ್ನು ಕಿತ್ತು ಹಾಕುವ ನಿರ್ಧಾರಕ್ಕೆ ಬಂದಿದ್ದಾಗಿ ಚೌಡಪ್ಪ ಅಳಲು ವ್ಯಕ್ತಪಡಿಸಿದ್ದಾರೆ. ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್‌ಗೆ 18,000 ಸಾವಿರ ರೂ. ಪರಿಹಾರ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next