Advertisement

ಇನ್ನಷ್ಟು ಅಭಿವೃದ್ಧಿಗೆ ಬೆಂಬಲಿಸಿ: ಶೆಟ್ಟರ

11:04 AM Apr 27, 2023 | Team Udayavani |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕ್ಷೇತ್ರದ ಅಭ್ಯುದಯಕ್ಕೆ ಸತತ ಶ್ರಮಿಸುತ್ತ ಬಂದಿದ್ದೇನೆ. ನಿಮ್ಮಲ್ಲಿ ಒಬ್ಬನಾಗಿ ಸದಾ ನಿಮ್ಮ ಸೇವೆಯ ಮಹದಾಸೆ ಹೊಂದಿದ್ದೇನೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

Advertisement

ಇಲ್ಲಿನ ವಾರ್ಡ್‌ ಸಂಖ್ಯೆ 49ರ ಆಶ್ರಯ ಕಾಲೊನಿ, ಮಹಾಲಕ್ಷ್ಮೀ ನಗರ ಇನ್ನಿತರೆ ಬಡಾವಣೆಗಳ ನಿವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಗಳು ಆಗಿವೆ. ಸ್ಮಾರ್ಟ್‌ಸಿಟಿ, ಬಿಆರ್‌ಟಿಎಸ್‌ ನಂತರ ಹಲವು ಯೋಜನೆಗಳು, ಮೂಲಭೂತ ಸೌಲಭ್ಯಗಳ ಕಾರ್ಯಗಳು ಆಗಿದ್ದು, ಜನರ ಜೀವನ ಶೈಲಿ ಸುಧಾರಣೆಗೆ ಹಲವು ಕ್ರಮ ಕೈಗೊಳ್ಳಲಾಗಿದೆ. ಇನ್ನಷ್ಟು ಸುಧಾರಣೆ ಕಾರ್ಯಗಳ ನಿಟ್ಟಿನಲ್ಲಿ ತಮಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಅನೀಲಕುಮಾರ ಪಾಟೀಲ, ಸದಾನಂದ ಡಂಗನವರ, ಶರಣಪ್ಪ ಕೊಟಗಿ, ರಜತ ಉಳ್ಳಾಗಡ್ಡಿ ಮಠ, ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next