Advertisement

ಜಗದ್ಗುರು ಭಾರತ ಮೋದಿಯಿಂದ ಸಾಧ್ಯ: ನಳಿನ್‌

01:00 AM Mar 22, 2019 | Harsha Rao |

ಮಂಗಳೂರು: ಐದು ವರ್ಷಗಳಲ್ಲಿ ಜಗತ್ತೇ ಅಚ್ಚರಿಪಡುವಂತೆ ಭಾರತವನ್ನು ಮುನ್ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಜಗದ್ಗುರು ಭಾರತ ಕನಸಿನ ಸಾಕಾರ ಸಾಧ್ಯ ಎಂದು ಜನ ನಂಬಿದ್ದಾರೆ ಮತ್ತು ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಿ ಮಾಡಲಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ – ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

Advertisement

ಸಂಘನಿಕೇತನದಲ್ಲಿ ಗುರುವಾರ ಜರಗಿದ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮೋದಿಯವರು ಜನಪರ 153 ಯೋಜನೆಗಳನ್ನು ದೇಶಕ್ಕೆ ನೀಡಿದ್ದಾರೆ. ನುಡಿದಂತೆ ಭ್ರಷ್ಟಚಾರಮುಕ್ತ ಆಡಳಿತ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಪ್ರಧಾನಿಯಾಗಲಿ, ಅವರ ಸಂಪುಟದ ಸಚಿವರ ಅಥವಾ ಬಿಜೆಪಿ ಸಂಸತ್ಸದಸ್ಯರ ಮೇಲಾಗಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎಂದರು.

ಮೋದಿ ಆಡಳಿತದಲ್ಲಿ ಕರ್ನಾಟಕ ಹಾಗೂ ದ.ಕ. ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹರಿದು ಬಂದಿದೆ. 2009ರಿಂದ 2014ರ ವರೆಗಿನ 5 ವರ್ಷಗಳ ಯುಪಿಎ ಆಡಳಿತದಲ್ಲಿ ರಾಜ್ಯಕ್ಕೆ 11,000 ಕೋ.ರೂ. ಹಾಗೂ ದಕ್ಷಿಣ ಕನ್ನಡಕ್ಕೆ 3,500 ಕೋ.ರೂ. ಅನುದಾನ ಮಾತ್ರ ಲಭಿಸಿತ್ತು. ಆದರೆ ನರೇಂದ್ರ ಮೋದಿ ಅವರ ಆಡಳಿತದಲ್ಲಿ 2014ರಿಂದ 2019ರ ವರೆಗಿನ 5 ವರ್ಷಗಳ ಆಡಳಿತದಲ್ಲಿ ಕರ್ನಾಟಕ 2.15 ಲಕ್ಷ ಕೋ.ರೂ. ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ 16,520 ಕೋ.ರೂ. ಅನುದಾನ ಲಭಿಸಿದೆ ಎಂದರು.

ಬಿಜೆಪಿ ಉಪಾಧ್ಯಕ್ಷ ರವಿಶಂಕರ ಮಿಜಾರ್‌ ಮಾತನಾಡಿದರು. ಶಾಸಕ ವೇದವ್ಯಾಸ ಕಾಮತ್‌ ಸ್ವಾಗತಿಸಿ ದರು. ಸಂಜೀವ ಮಠಂದೂರು. ಎನ್‌.ಯೋಗೀಶ್‌ ಭಟ್‌, ಪ್ರತಾಪಸಿಂಹ ನಾಯಕ್‌, ಗೋಪಾಲಕೃಷ್ಣ ಹೇರಳೆ, ನಿತಿನ್‌ ಕುಮಾರ್‌, ಸಂಜೀವ, ಕ್ಯಾ| ಬೃಜೇಶ್‌ ಚೌಟ, ಸುದರ್ಶನ್‌ ಎಂ., ಗಣೇಶ ಹೊಸಬೆಟ್ಟು, ಪ್ರೇಮಾನಂದ ಶೆಟ್ಟಿ, ರಮೇಶ್‌ ಕಂಡೆಟ್ಟು, ಭಾಸ್ಕರಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next