Advertisement

ಜಾಧವ್‌ ಬಿಜೆಪಿಗೆ ಹೋದರೆ ಹೋಗಲಿ: ಪ್ರಿಯಾಂಕ್‌ 

01:20 AM Jan 21, 2019 | |

ಕಲಬುರಗಿ: ಲೋಕಸಭೆ ಚುನಾವಣೆಗೆ ಬಿಜೆಪಿ ಬಳಿ ಸಮರ್ಥ ಅಭ್ಯರ್ಥಿಗಳಿಲ್ಲ. ಅದಕ್ಕಾಗಿ ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್‌ ಅವರನ್ನು ಸೆಳೆಯೋಕೆ ಮುಂದಾಗಿದ್ದಾರೆ. ಆದರೆ, ಲೋಕಸಭೆ ಚುನಾವಣೆಯನ್ನು ಅಷ್ಟು ಸಲೀಸಾಗಿ ತೆಗೆದುಕೊಳ್ಳೋ ಹಾಗಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಜಾಧವ್‌ ವಿಚಾರದಲ್ಲಿ ಮಾತಾಡೋಕೆ ಹೋಗುವುದಿಲ್ಲ. ಸಚಿವ ಸಂಪುಟ ವಿಸ್ತರಣೆ ಆದ ಮೇಲೆ ನಿಗಮ-ಮಂಡಳಿ ಸ್ಥಾನ ನೀಡಿದ್ದರೂ ಮುನಿಸಿಕೊಂಡರು. ತದನಂತರ ಸಂಪರ್ಕಕ್ಕೆ ಸಿಗಲೇ ಇಲ್ಲ. ಆದರೆ, ಜಾಧವ್‌ ಕಷ್ಟಪಟ್ಟಿರುವುದನ್ನು ಮರೆತಿದ್ದಾರೆ. ಸರ್ಕಾರಿ ವೈದ್ಯರಾಗಿದ್ದ ಜಾಧವ್‌ ಅವರು ವಿಆರ್‌ಎಸ್‌ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಒಳ್ಳೆಯದಾದರೆ ನಮಗೆ ಹೇಳಲ್ಲ. ಕೆಟ್ಟದಾದರೆ ನಮ್ಮ ತಲೆಗೆ ಕಟ್ಟುತ್ತಾರೆ ಎಂದರು. ಚಿಂಚೋಳಿ ಕ್ಷೇತ್ರಕ್ಕೆ ಶಾಸಕರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇವೆ. ಅವರು ಬಿಜೆಪಿಗೆ ಹೋಗುವುದಾದರೆ ಹೋಗಲಿ. ಆದರೆ, ಆರೋಪ ಮಾಡಿ ಹೋಗೋದು ಬೇಡ.ಎರಡು ಲಕ್ಷ ಮತದಾರರಿಂದ ಆಯ್ಕೆಯಾಗಿ ಬಂದಿದ್ದಾರೆ.

ನಮ್ಮಿಂದ ಬುದ್ಧಿವಾದ ಹೇಳಿಸಿಕೊಳ್ಳಬಾರದು. ಸಂಸದ ಡಾ|ಮಲ್ಲಿಕಾರ್ಜುನ ಖರ್ಗೆ ವಿರುದ್ಧ  ಎದುರಾಳಿಯಾಗಿ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ನಾನಂತೂ ಪಕ್ಷ ಹೇಳಿದರೆ ಸಚಿವ ಸ್ಥಾನ ಬಿಡೋಕೂ ಸಿದ್ಧ . ಜತೆಗೆ, ಶಾಸಕ ಸ್ಥಾನಕ್ಕೂ ನಿಲ್ಲಬೇಡ ಎಂದು ಹೇಳಿದ್ರೆ ನಿಲ್ಲೋದಿಲ್ಲ. ಡೆಸ್ಕ್ನಲ್ಲಿ ಕುಳಿತು ಪಕ್ಷ ಸಂಘಟನೆ ಮಾಡು ಎಂದರೆ ಮಾಡ್ತೀನಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next