Advertisement

ಜಿಪಂ ವೇದಿಕೆ ಮೇಲಿಂದ ಇಳಿದು ಕೆಳಗೆ ಕುಳಿತ ಜಾಧವ್‌

11:51 PM Sep 30, 2019 | Team Udayavani |

ಕಲಬುರಗಿ: ಜಿಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಪಂ 16ನೇ ಸಾಮಾನ್ಯ ಸಭೆಗೆ ಆಗಮಿಸಿದ್ದ ಸಂಸದ ಡಾ| ಉಮೇಶ ಜಾಧವ್‌ ವೇದಿಕೆ ಮೇಲೆ ಅಧ್ಯಕ್ಷರ ಪಕ್ಕದ ಕುರ್ಚಿಯಲ್ಲಿ ಕುಳಿತು ತದನಂತರ ಕೆಳಗಿಳಿದ ಪ್ರಸಂಗ ನಡೆಯಿತು. ಸಭೆಗೆ ಪ್ರಥಮ ಬಾರಿಗೆ ಆಗಮಿಸಿದ್ದರಿಂದ ಸಂಸದರನ್ನು ಹೂಗುಚ್ಛ ನೀಡಿ ಸ್ವಾಗತ ಕೋರಲಾಯಿತು.

Advertisement

ನಂತರ ಮತ್ತೆ ಅಧ್ಯಕ್ಷರ ಪಕ್ಕ ಕುಳಿತಾಗ, ವಿಪಕ್ಷ ಕಾಂಗ್ರೆಸ್‌ ಜಿಪಂ ಸದಸ್ಯ ಶಿವರುದ್ರ ಭೀಣಿ ಹಾಗೂ ವಿಪಕ್ಷ ನಾಯಕ ಶಿವಾನಂದ ಪಾಟೀಲ್‌ ಆಕ್ಷೇಪಿಸಿ ದರು. ಇದಕ್ಕೆ ಸಂತೋಷ ಪಾಟೀಲ್‌, ಸಿದ್ಧರಾಮ ಪ್ಯಾಟಿ ಧ್ವನಿಗೂಡಿಸಿದರು. ಶಿಷ್ಟಾಚಾರ ಪ್ರಕಾರ ಸಂಸದರು ಸಾಮಾನ್ಯ ಸಭೆ ವೇದಿಕೆ ಮೇಲೆ ಕುಳಿತೊಳ್ಳಬಹುದೇ ಎಂದು ಸಿಇಒ ಅವರನ್ನು ಪ್ರಶ್ನಿಸಿದರು. ಇದಕ್ಕೆ ಸಿಇಒ ಉತ್ತರ ಹೇಳುವ ಮೊದಲೇ ಸಂಸದ ಡಾ| ಜಾಧವ್‌, “ಅಷ್ಟೇಕೆ ನಾನೇ ಕೆಳಗೆ ಬರುತ್ತೇನೆ’ ಎಂದು ಹೇಳಿ ಕೆಳಗೆ ಬಂದು ಶಾಸಕ ರಾಗಿರುವ ಪುತ್ರ ಡಾ| ಅವಿನಾಶ ಜಾಧವ್‌ ಪಕ್ಕ ಕುಳಿತರು.

Advertisement

Udayavani is now on Telegram. Click here to join our channel and stay updated with the latest news.

Next