Advertisement

ಜಾಧವ್‌ಗೂ ಇತರೆ ಖೈದಿಗಳಿಗೂ ವ್ಯತ್ಯಾಸವಿದೆ: ಪಾಕ್‌

03:45 AM Jul 03, 2017 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಕುಲಭೂಷಣ್‌ ಜಾಧವ್‌ ಅವರಿಗೆ ರಾಯಭಾರಿ ಭೇಟಿಗೆ ಅವಕಾಶ ನೀಡುವಂತೆ ಭಾರತ ಸಲ್ಲಿಸಿದ್ದ ಮನವಿಯನ್ನು ಪಾಕ್‌ ಮತ್ತೆ ತಿರಸ್ಕರಿಸಿದೆ. ಜತೆಗೆ, ಪಾಕ್‌ ಜೈಲುಗಳಲ್ಲಿರುವ ಭಾರತದ ಇತರೆ ಖೈದಿಗಳ ಪ್ರಕರಣವನ್ನೂ, ಜಾಧವ್‌ ಪ್ರಕರಣವನ್ನೂ ಒಂದೇ ಎಂದು ಭಾವಿಸಲು ಸಾಧ್ಯವಿಲ್ಲ ಎಂದಿದೆ. ಶನಿವಾರವಷ್ಟೇ ಜಾಧವ್‌ಗೆ ರಾಯಭಾರಿ ಭೇಟಿಗೆ ಅವಕಾಶ ನೀಡುವಂತೆ ಭಾರತ ಕೋರಿತ್ತು. ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿದ ಪಾಕ್‌, |ನಮ್ಮ ದೇಶದಲ್ಲಿ ಉಗ್ರ ಕೃತ್ಯ ಎಸಗುವ ಸಲುವಾಗಿ ಭಾರತವೇ ತನ್ನ ಅಧಿಕಾರಿ ಜಾಧವ್‌ರನ್ನು ಇಲ್ಲಿಗೆ ಕಳುಹಿಸಿದೆ. ಹೀಗಿರುವಾಗ, ಇತರೆ ಖೈದಿಗಳಂತೆ ಅವರನ್ನು ನಡೆಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ರಾಯಭಾರಿ ಭೇಟಿಗೆ ಅವಕಾಶದ ಪ್ರಶ್ನೆಯೇ ಬರುವುದಿಲ್ಲ, ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next