Advertisement

ನವೆಂಬರ್‌ ಮೊದಲ ವಾರದಲ್ಲಿ “ಜಬರ್‌ದಸ್ತ್ ಶಂಕರ’

10:41 PM Oct 23, 2019 | mahesh |

ಜಲನಿಧಿ ಫಿಲಂಸ್‌ ಲಾಂಛನದಲ್ಲಿ ತಯಾರಾದ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ನಿರ್ದೇಶನದ “ಜಬರ್‌ದಸ್ತ್ ಶಂಕರ’ ಸಿನೆಮಾ ನವೆಂಬರ್‌ ಮೊದಲ ವಾರದಲ್ಲಿಯೇ ರಿಲೀಸ್‌ ಆಗುವುದು ಪಕ್ಕಾ ಆಗಿದೆ.

Advertisement

ಈಗಾಗಲೇ ಕೋಸ್ಟಲ್‌ವುಡ್‌ನ‌ಲ್ಲಿ “ಗಿರಿಗಿಟ್‌’ ಆಟವನ್ನು ಮೆಚ್ಚಿ ಕೊಂಡಾಡಿದ ತುಳು ಚಿತ್ರಪ್ರೇಮಿಗಳು ಈಗ ಇನ್ನೊಂದು ಬಹುನಿರೀಕ್ಷಿತ ಸಿನೆಮಾದ ನಿರೀಕ್ಷೆಯಲ್ಲಿದ್ದಾರೆ. ತುಳು ಚಿತ್ರರಂಗದಲ್ಲಿ ಹೊಸತನವನ್ನು ಹುಟ್ಟುಹಾಕಿದ ದೇವದಾಸ್‌ ಕಾಪಿಕಾಡ್‌ ಅವರ ಸಿನೆಮಾ ಇದಾಗಿರುವ ಸದ್ಯ ಬಹಳಷ್ಟು ನಿರೀಕ್ಷೆ ಮನೆಮಾಡಿದೆ.

ಮಣಿಕಾಂತ್‌ ಕದ್ರಿ ಅವರ ಸಂಗೀತದಲ್ಲಿ ಮೂಡಿಬಂದ ಹಾಡನ್ನು ದೇವದಾಸ್‌ ಕಾಪಿಕಾಡ್‌ ರಚಿಸಿ ಅವರೇ ಹಾಡಿದ್ದಾರೆ. ಸಿನೆಮಾದಲ್ಲಿ ಮೂರು ಹಾಡುಗಳಿವೆ. ತಾರಾಗಣದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ ಬಿ. ಸಾಯಿಕೃಷ್ಣ, ಸತೀಶ್‌ ಬಂದಲೆ, ಗೋಪಿನಾಥ ಭಟ್‌, ಗಿರೀಶ್‌ ಎಂ. ಶೆಟ್ಟಿ ಕಟೀಲು, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಪ್ರತೀಕ್‌ ಶೆಟ್ಟಿ, ಸುನಿಲ್‌ ನೆಲ್ಲಿಗುಡ್ಡೆ, ಶರಣ್‌ ಕೈಕಂಬ, ತಿಮ್ಮಪ್ಪ ಕುಲಾಲ್‌ ಹಾಗೂ ಚಾಪರR ತಂಡದ ಕಲಾವಿದರು ಸಿನೆಮಾದಲ್ಲಿದ್ದಾರೆ. ಛಾಯಾಚಿತ್ರಗ್ರಹಣ: ಸಿದ್ದು ಜಿ.ಎಸ್‌., ಉದಯ ಬಲ್ಲಾಳ್‌, ಸಂಗೀತ: ಮಣಿಕಾಂತ್‌ ಕದ್ರಿ, ಸಾಹಸ ಮಾಸ್‌ ಮಾದ, ನೃತ್ಯ: ಸ್ಟಾರ್‌ಗಿರಿ, ವಿನಾಯಕ ಆಚಾರ್ಯ, ಮುಖ್ಯ ಸಹಾಯಕ ನಿರ್ದೇಶಕರು: ಅರ್ಜುನ್‌ ಕಾಪಿಕಾಡ್‌, ಸಹಾಯಕ ನಿರ್ದೇಶಕ: ಪ್ರಶಾಂತ್‌ ಕಲ್ಲಡ್ಕ.

Advertisement

Udayavani is now on Telegram. Click here to join our channel and stay updated with the latest news.

Next