Advertisement

ಸಿದ್ದರಾಮಯ್ಯಗೆ ಬಿಜೆಪಿ ಬಗ್ಗೆ ಚರ್ಚಿಸುವ ಅರ್ಹತೆಯಿಲ್ಲ: ಮಾಧುಸ್ವಾಮಿ

09:07 AM Sep 11, 2019 | Team Udayavani |

ಕೊಪ್ಪಳ: ಸಿದ್ದರಾಮಯ್ಯನವರು ಸಂಪೂರ್ಣ ದೇವೆಗೌಡರ ಹಂಗಲ್ಲಿ ಬೆಳೆದು ಕಾಂಗ್ರೆಸ್ ನಾಯಕರಾಗಿದ್ದಾರೆ. ಬಿಜೆಪಿ ಅಧ್ಯಕ್ಷರ ಬಗ್ಗೆ ಚರ್ಚಿಸಲು ಅವರು ಯಾರು? ಸಿದ್ದರಾಮಯ್ಯಗೆ ಬಿಜೆಪಿ ಬಗ್ಗೆ ಚರ್ಚಿಸುವ ಅರ್ಹತೆಯಿಲ್ಲ ಎಂದು ಸಂಸದೀಯ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

Advertisement

ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರ ಗರಡಿಯಲ್ಲಿ ಬೆಳೆದವರು ? ಇಡೀ ಅಧಿಕಾರವನ್ನು ದೇವೆಗೌಡರ ರಕ್ಷಣೆಯಲ್ಲಿ ಬೆಳೆದಿದ್ದಾರೆ, ಬಿಜೆಪಿ ಬಗ್ಗೆ ಮಾತನಾಡುವ ಮುನ್ನ ಯೋಚಿಸಲಿ. ಅವರ ಯೋಗ್ಯತೆಗೆ ಅವರನ್ನು ಪಕ್ಷದ ನಾಯಕನನ್ನಾಗಿ ಮಾಡಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ನವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ. ಸದನ ಸಮಿತಿಗಳನ್ನು ನೇಮಿಸಬೇಕೆಂದು ಕಳೆದೊಂದು ತಿಂಗಳಿಂದ ಕೇಳುತ್ತಿದ್ದೇವೆ. ಕಾಂಗ್ರೆಸ್‌ನಿಂದ ಈ ವರೆಗೂ ಪಟ್ಟಿ ನೀಡಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗದ ಪಕ್ಷದವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಮೊದಲು ಅವರ ಮನೆಯನ್ನು ತೊಳೆದುಕೊಂಡು ನಂತರ ನಮ ಬಗ್ಗೆ ಮಾತನಾಡಲಿ ಎಂದು ಮಾಧುಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next