Advertisement

ಲಾಕ್‌ ಡೌನ್ ಆಗಿ 14 ದಿನವಾಯಿತು, ಸರಕಾರದ ಯಾವುದೇ ಯೋಜನೆ ಜಾರಿಯಾಗಿಲ್ಲ: ಐವನ್ ಡಿಸೋಜಾ

09:08 AM Apr 05, 2020 | keerthan |

ಮಂಗಳೂರು: ದೇಶದ್ಯಾಂತ ಲಾಕ್‌ ಡೌನ್ ಆಗಿ 14 ದಿವಸಗಳಾಯಿತು, ಆದರೆ ಸರಕಾರ ಯಾವುದೇ ಯೋಜನೆ ಜಾರಿಯಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ, ಸೋಜಾ ಹೇಳಿದರು.

Advertisement

ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರಿಗೆ ದಿನಸಿ ವಸ್ತು ಕೊಡದೇ ಇದ್ದರೆ ಜನಸಾಮಾನ್ಯರು ಏನು‌ ಮಾಡಬೇಕು. ಸರಕಾರದ ಯಾವುದೇ ರೀತಿಯ ಪೆನ್ಷನ್ ಬರುತ್ತಿಲ್ಲ ಎಂದರು.

ಇಎಂಐ ಕಟ್ಟಬೇಡಿ ಎಂದಿದ್ದೀರಿ, ಆದರೆ ಜನರ‌ ಹಣ ಕಟ್ ಆಗುತ್ತಿದೆ. ಇಂದಿರಾ ಕ್ಯಾಂಟೀನ್ ಊಟಕ್ಕೂ ಹಣ ನೀಡಬೇಕಾಗಿದೆ. ವೆಂಟಿಲೇಶನ್ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲ. ಕೇಂದ್ರ ಸರಕಾರ, ರಾಜ್ಯ ಸರಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸರಕಾರ ಎಪಿಎಲ್ ಮತ್ತು ಬಿಪಿಎಲ್ ಅನ್ನುವ ಭೇದವಿಲ್ಲದೇ ಜನರ‌ ಮನೆಗೆ ದಿನಸಿ ವಸ್ತುಗಳನ್ನು ನೀಡಬೇಕು ಎಂದು  ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ, ಸೋಜಾ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next