Advertisement

ಕನ್ನಡದ ಅಸ್ಮಿತೆ ಪ್ರತಿಪಾದಿಸಿದ ಮುಖ್ಯಮಂತ್ರಿ

06:30 AM Mar 17, 2018 | Team Udayavani |

ಬೆಂಗಳೂರು: ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ರಚನೆ ಮಾಡಿ ಕನ್ನಡದ ಅಸ್ಮಿತೆಯನ್ನು ಪ್ರತಿಬಿಂಬಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಮತ್ತೆ ಅದೇ ವಿಷಯವನ್ನು ಫೇಸ್‌ಬುಕ್‌ ಮೂಲಕ ಪ್ರತಿಪಾದಿಸಿದ್ದು, ಕನ್ನಡ ನಾಡ ಧ್ವಜ ಹೊಂದುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

ಕಳೆದ ವರ್ಷ ಸರ್ಕಾರ ನಾಡಧ್ವಜ ರಚನೆಗೆ ಸಮಿತಿ ಮಾಡಿದಾಗ ಮಾಧ್ಯಮಗಳು ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವುದನ್ನು ಉಲ್ಲೇಖೀಸಿರುವ ಮುಖ್ಯಮಂತ್ರಿ  ಸರ್ಕಾರ ರಚಿಸಿದ್ದ ಸಮಿತಿ ವರದಿ ನೀಡಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡಿಗರು ತಮ್ಮದೇ ನಾಡಧ್ವಜವನ್ನು ಅಳವಡಿಸಿಕೊಳ್ಳುವುದು. ನಾಡಿನ ಭಾಷೆಗೆ ಪ್ರಾಧಾನ್ಯತೆ ಕೊಡುವುದು. ಅಲ್ಲದೇ ತಮ್ಮ ನಾಡಿನ ಅಸ್ಮಿತೆಯ ಬದುಕನ್ನು ಅವರಿಚ್ಚೆಯಂತೆ ಬದುಕುವುದು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next