Advertisement

ಲಂಚಕ್ಕಾಗಿ ಹಪಹಪಿ: ಐಟಿಐ ಕಾಲೇಜು ಪ್ರಾಚಾರ್ಯ ಎಸಿಬಿ ಬಲೆಗೆ

10:00 AM Dec 15, 2021 | Team Udayavani |

ಹುಣಸೂರು: ಬೇರೆಡೆಗೆ ವರ್ಗಾವಣೆಯಾಗಿದ್ದ ಐ.ಟಿ.ಐ ಕಾಲೇಜಿನ ಜೆ.ಟಿ.ಓ.ರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಲಂಚಕ್ಕಾಗಿ ಪೀಡಿಸಿದ್ದ ಪ್ರಾಚಾರ್ಯರೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

Advertisement

ಹುಣಸೂರು ಐ.ಟಿ.ಐ. ಕಾಲೇಜಿನ ಪ್ರಾಚಾರ್ಯ ಶ್ರೀಕಂಠಾರಾಧ್ಯ ಲಂಚ ಪಡೆಯುವಾಗ ಎಸಿಬಿ ಪ್ರಭಾರ ಡಿವೈಎಸ್‌ಪಿ ಧರ್ಮೇದ್ರ, ಸಿ.ಪಿ.ಐ. ಮೋಹನ್ ಕೃಷ್ಣರ ನೇತೃತ್ವದಲ್ಲಿ ಅಧಿಕಾರಿಗಳು ಮೈಸೂರಿನಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ನಾಗರಾಜ್‌ ಎಂಬವರಿಗೆ ಮೈಸೂರಿಗೆ ವರ್ಗಾವಣೆಯಾಗಿತ್ತು. ಐಟಿಐ ಕಾಲೇಜಿನಿಂದ ಇವರನ್ನು ಬಿಡುಗಡೆಗೊಳಿಸಲು 50 ಸಾವಿರ ರೂ ಲಂಚ ಕೇಳಿದ್ದರೆಂದು ನಾಗರಾಜ್ ಮೈಸೂರು ಎ.ಸಿ.ಬಿ.ಗೆ ದೂರು ನೀಡಿದ್ದರು. ಮುಂಗಡವಾಗಿ 25 ಸಾವಿರ ರೂ ನೀಡಿದ್ದರು, ಅಲ್ಲದೆ ಮತ್ತೆ ಐದು ಸಾವಿರ ರೂ ನೀಡುವ ವೇಳೆ ಬಂದಿಸಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮೂರು ವಾಹನಗಳಲ್ಲಿ ಐಟಿಐ ಕಾಲೇಜಿಗೆ ಆಗಮಿಸಿದ ಎಸಿಬಿ ಡಿವೈಎಸ್‌ಪಿ ಧಮೇಂದ್ರ ನೇತೃತ್ವದ ಅಧಿಕಾರಿಗಳ ತಂಡವು ದಾಖಲೆಗಳನ್ನು ಪರಿಶೀಲಿಸಿದರು.

ವರ್ಗಾವಣೆಗೊಂಡಿರುವ ತಮ್ಮನ್ನು ಕಾಲೇಜಿನಿಂದ ಬಿಡುಗಡೆಗೊಳಿಸಲು ಹುಣಸೂರು ಸರಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಶ್ರೀಕಂಠಾರಾದ್ಯ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರೆಂದು ಎಸಿಬಿಗೆ ನಾಗರಾಜ್ ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next