Advertisement

ಬಳ್ಳಾರಿಯಲ್ಲಿ ಮುಂದುವರಿದ ಐಟಿ ದಾಳಿ

11:22 PM Apr 21, 2019 | Team Udayavani |

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಮುಖಂಡರು ಹಾಗೂ ಮತ್ತವರ ಬೆಂಬಲಿಗರ ಮನೆಗಳ ಮೇಲೆ ಚುನಾವಣಾ ಸ್ವೀಪ್‌ ಸಮಿತಿ, ಅಬಕಾರಿ, ಆದಾಯ ತೆರಿಗೆ ಅ ಧಿಕಾರಿಗಳು ಭಾನುವಾರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

Advertisement

ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರ ಮೋಕಾ ರಸ್ತೆಯಲ್ಲಿನ ಕಚೇರಿ, ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಆಪ್ತ ಸಹಾಯಕ ಬಿ.ಕೆ. ರಾಜು ಮನೆ, ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಸಂಬಂ ಧಿ, ಬಲಗೈ ಬಂಟ ಎರ್ರಿಸ್ವಾಮಿ, ಬಿಜೆಪಿ ಮುಖಂಡ ವೆಂಕಟರೆಡ್ಡಿ ಅವರ ಮನೆಗಳ ಮೇಲೆ ದಾಳಿ ನಡೆಸಿರುವ ಅ ಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಎರ್ರಿಸ್ವಾಮಿ ಸೇರಿ ಎಲ್ಲರೂ ಸಹ ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ.

ಆದರೆ ಏನೂ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ದಾಳಿ ವಿಷಯ ತಿಳಿಯುತ್ತಿದ್ದಂತೆ ಶಾಸಕ ಬಿ. ನಾಗೇಂದ್ರ, ಎರ್ರಿಸ್ವಾಮಿ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದ ಮಾಜಿ ಶಾಸಕ ಅನಿಲ್‌ಲಾಡ್‌ ಮತ್ತು ಇತರೆ ಮುಖಂಡರ ಕೊಠಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದ ಆದಾಯ ತೆರಿಗೆ ಅ ಧಿಕಾರಿಗಳು ಇದೀಗ ಮತದಾನ ಪ್ರತಿಕ್ರಿಯೆಗೆ ಇನ್ನೆರಡು ದಿನ ಬಾಕಿಯಿರುವಾಗ ತಮ್ಮ ದಾಳಿ ಮುಂದುವರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಡವಾದ ರೋಡ್‌ ಶೋ: ಪ್ರಚಾರದ ಕೊನೇ ದಿನ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಲ್‌ಬಜಾರ್‌ನಲ್ಲಿ ಶಾಸಕ ಬಿ. ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ರೋಡ್‌ ಶೋ ಹಮ್ಮಿಕೊಂಡಿದ್ದರು. ಎರ್ರಿಸ್ವಾಮಿಯವರು ಈ ರೋಡ್‌ ಶೋ ಉಸ್ತುವಾರಿ ವಹಿಸಿಕೊಂಡಿದ್ದರು ಎನ್ನಲಾಗುತ್ತಿದ್ದು, ಆದಾಯ ತೆರಿಗೆ ಅಧಿ ಕಾರಿಗಳ ದಾಳಿಯಿಂದಾಗಿ ರೋಡ್‌ ಶೋಗೆ ಅಡ್ಡಿಯಾಗಿ ತಡವಾಗಿ ಆರಂಭಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next