Advertisement

ದಲಿತರಲ್ಲಿ ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ : ಆರ್.ಧ್ರುವನಾರಾಯಣ್

04:36 PM Jul 03, 2021 | Team Udayavani |

ಮೈಸೂರು : ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇರೋದು ನಿಜ, ದಲಿತರಲ್ಲಿ ಅರ್ಹತೆ, ಸಿನಿಯಾರಿಟಿ ಎಲ್ಲಾ ಮುಖ್ಯ, ನನಗೆ ತಿಳಿದಂತೆ ನಮ್ಮ ಸಮುದಾಯದಲ್ಲಿ ಮಲ್ಲಿಕಾರ್ಜುನ ಖರ್ಗೆ ದೊಡ್ಡಮಟ್ಟದಲ್ಲಿದ್ದಾರೆ. ಸಹಜವಾಗಿ ಒಬ್ಬ ಸೀನಿಯರ್ ಮೋಸ್ಟ್ ಸಿಎಂ ಆಗುವುದರಲ್ಲಿ ತಪ್ಪೇನಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಪರ  ಆರ್‌.ಧ್ರುವನಾರಾಯಣ್ ಬ್ಯಾಟ್ ಬೀಸಿದ್ದಾರೆ.

Advertisement

ಅವರು ಸಾಕಷ್ಟು ಬಾರಿ ಸಿಎಂ ಆಗಬೇಕಿತ್ತು. ಆಗ ಬಹುಮತ ಬರಲಿಲ್ಲ. ಹಿರಿತನದಲ್ಲಿ ನಾವೆಲ್ಲಾ ಬಹಳ ಜೂನಿಯರ್ ಇದ್ದೀವಿ‌.
ನಾವೆಲ್ಲಾ ಸಿಎಂ ಹುದ್ದೆ ಆಸೆ ಪಟ್ಟವರಲ್ಲ. ಪಕ್ಷದಲ್ಲಿ ಕಾರ್ಯಾಧ್ಯಕ್ಷರಂತೆ ದೊಡ್ಡ ಹುದ್ದೆ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ.
ದಲಿತ ಮುಖ್ಯಮಂತ್ರಿ ಕೂಗು ಅಪ್ರಸ್ತುತ. ಕಾಂಗ್ರೆಸ್ ದಲಿತರಿಗೆ ಕೊಟ್ಟಷ್ಟು ಯಾವ ಪಕ್ಷವೂ ಕೊಟ್ಟಿಲ್ಲ. ಕೇಂದ್ರದಲ್ಲಿ ಸಂಪುಟ ಪುನರ್‌‌ ರಚನೆ ಆಗ್ತಿದೆ. ಐದು ಮಂದಿ ದಲಿತ ಸಂಸದರಿದ್ದಾರೆ ಬಿಜೆಪಿ ಯಾಕೆ ಸಚಿವರನ್ನಾಗಿ ಮಾಡ್ತಿಲ್ಲ. ಕಾಂಗ್ರೆಸ್ ಖರ್ಗೆ ಪರಾಜಿತರಾದರೂ ರಾಜ್ಯಸಭೆ ಶಾಸಕಾಂಗ ನಾಯಕರನ್ನಾಗಿ ಮಾಡಿದೆ ಎಂದರು.

ಮುನಿಯಪ್ಪಗೆ ಸಚಿವ ಸ್ಥಾನ ಕೊಟ್ಟಿದೆ. ಪರಮೇಶ್ವರ್ ರಾಜ್ಯದಲ್ಲಿ ಡಿಸಿಎಂ ಆದ್ರು‌. ಹಿಂದೆ ಸಿಎಂ ಆಗುವ ಅವಕಾಶ ದಲಿತರಿಗೆ ಇತ್ತು. 2008 ರಲ್ಲಿ ಬಹುಮತ ಬಂದಿದ್ರೆ ಖರ್ಗೆ ಸಿಎಂ ಆಗ್ತಿದ್ರು. 2013 ರಲ್ಲಿ ಪರಮೇಶ್ವರ್‌ ಗೆದ್ದಿದ್ರೆ, ಪರಮೇಶ್ವರ್ ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಹಂಚಿಕೆ ಆಗ್ತಿತ್ತು. ಕಾಂಗ್ರೆಸ್ ಯಾವತ್ತು ದಲಿತರಿಗೆ ಅನ್ಯಾಯ ಮಾಡಿಲ್ಲ‌. ದಲಿತರಲ್ಲಿ ನಮ್ಮವರೊಬ್ಬರು ಸಿಎಂ ಆಗಲಿಲ್ಲ ಎಂಬ ಕೊರಗು ಇದೆ, ಅದಂತೂ ನಿಜ ಎಂದರು.

ಸಮಯ ಸಂದರ್ಭ ಬಂದಾಗ ಅವಕಾಶ ಸಿಗುತ್ತೆ. ಸಾಮಾಜಿಕ ನ್ಯಾಯ ಕೊಟ್ಟಿರೋದೆ ಕಾಂಗ್ರೆಸ್. ಎಲ್ಲಾ ಸಮಾಜದವರಿಗೂ ಅವಕಾಶ ಸಿಕ್ಕಿದೆ. ನಾನು ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ತೀರ್ಮಾನಿಸಿಲ್ಲ. ನಾನು ಲೋಕಸಭೆ ಚುನಾವಣೆಯಲ್ಲಿ ಕೇವಲ 1800 ಮತಗಳ ಅಂತರದಿಂದ ಸೋತಿದ್ದೇನೆ. ಮುಂದಿನ ಗುರಿ ಲೋಕಸಭಾ ಚುನಾವಣೆಗೆ. ಆಕಾಂಕ್ಷಿ ಅಷ್ಟೇ ಅಭ್ಯರ್ಥಿಯೂ ನಾನೆ‌ ಅಲ್ಲ‌. ಕಾಂಗ್ರೆಸ್‌ ನಲ್ಲಿ ಬಿ‌ಫಾರಂ‌ ಸಿಕ್ಕಾಗಲೇ ಗ್ಯಾರೆಂಟಿ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next