Advertisement

ನಮ್ಮದು ಸೈದ್ಧಾಂತಿಕ ಜಯ: ಮೋದಿ

12:15 PM Mar 07, 2018 | Team Udayavani |

ಹೊಸದಿಲ್ಲಿ: “ತ್ರಿಪುರದಲ್ಲಿ ಎಡಪಕ್ಷದ ಆಡಳಿತವನ್ನು ಕೊನೆಗಾಣಿಸಿರುವ ಬಿಜೆಪಿ ಯದ್ದು ಸೈದ್ಧಾಂತಿಕ ಜಯ. ದೇಶಾದ್ಯಂತ ಗೆಲುವಿನ ಓಟವನ್ನು ಮುಂದುವರಿಸಬೇಕೆಂದರೆ ಪಕ್ಷ ಇನ್ನಷ್ಟು ಪರಿಶ್ರಮಪಡಬೇಕಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದಿಲ್ಲಿಯಲ್ಲಿ ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಈಶಾನ್ಯದ ಮೂರು ರಾಜ್ಯಗಳಲ್ಲಿ ಪಕ್ಷದ ಸಾಧನೆಯ ಕುರಿತು ಪ್ರಸ್ತಾಪಿಸಿ ಈ ಮಾತುಗಳನ್ನು ಆಡಿದ್ದಾರೆ. ಸಭೆಗೆ ಪ್ರಧಾನಿ ಮೋದಿ ಆಗಮಿಸುತ್ತಲೇ ಬಿಜೆಪಿ ನಾಯಕರು,”ಜೀತ್‌ ಹಮಾರೀ ಜಾರೀ ಹೈ,ಅಬ್‌ ಕರ್ನಾಟಕ್‌ ಕಿ ಬಾರಿ ಹೈ’ (ನಮ್ಮ ಗೆಲುವು ಮುಂದುವರಿದಿದೆ. ಈಗ ಕರ್ನಾಟಕದ ಸರದಿ) ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದರು. ನಂತರ ಮಾತನಾಡಿದ ಪ್ರಧಾನಿ, ತ್ರಿಪುರವು 25 ವರ್ಷಗಳಿಂದಲೂ ಮಾರ್ಕ್ಸ್ವಾದದ ಕೋಟೆಯಾಗಿತ್ತು. ಈಗ ನಾವು ಸೈದ್ಧಾಂತಿಕ ಗೆಲುವು ಸಾಧಿಸಿದ್ದೇವೆ. ಹಿಂಸೆ, ದ್ವೇಷ ತುಂಬಿದ ಎಡಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ನಮಗೆ ಎಲ್ಲ ರಾಜ್ಯಗಳೂ ಸಮಾನ. ಅವುಗಳ ಅಭಿವೃದ್ಧಿಗೆ ದುಡಿಯುತ್ತೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next