Advertisement

ರಾಹುಲ್‌ ಗಾಂಧಿ ಪ್ರಧಾನಿ ಆಗುವುದು ತಿರುಕನ ಕನಸು

12:49 AM Mar 11, 2019 | Team Udayavani |

ಬೆಳಗಾವಿ/ಚಿಕ್ಕೋಡಿ: ಸಂಸತ್ತಿನಲ್ಲಿ 44 ಸಂಸದರನ್ನು ಇಟ್ಟುಕೊಂಡು ನಾವೇ ಮುಂದಿನ ಪ್ರಧಾನಿ ಎಂದುಬಿಂಬಿಸಿ ಕೊಳ್ಳುವ ರಾಹುಲ್‌ಗಾಂಧಿ, ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವ್ಯಂಗ್ಯವಾಡಿ ದ್ದಾರೆ.

Advertisement

ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಮೋದಿ ವಿಜಯ ಸಂಕಲ್ಪ ಯಾತ್ರೆ’ ಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಹುತೇಕ ಎಲ್ಲಾ ಸಂಸದರಿಗೆ ಟಿಕೆಟ್‌ ನೀಡುವ ಉದ್ದೇಶವಿದೆ. ಆದರೂ, ಕೆಲವೊಂದು ಕ್ಷೇತ್ರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕನಿಷ್ಟ 22 ಸೀಟು ಗೆದ್ದು ಮತ್ತೂಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುತ್ತೇವೆ. ಇದು ನಮ್ಮ ಸಂಕಲ್ಪ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ದಲ್ಲಿ ಬಿಜೆಪಿ 22 ಸ್ಥಾನ ಗೆದ್ದರೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ಆಗುವುದು ಖಚಿತ. ಉತ್ತಮ ಸರ್ಕಾರ ನೀಡುವಲ್ಲಿ ಅದು ವಿಫಲವಾಗಿದ್ದು, ದೋಸ್ತಿ
ಸರ್ಕಾರಕ್ಕೆ ಹೆಚ್ಚು ಕಾಲ ಉಳಿಗಾಲ ಇಲ್ಲ ಎಂದರು.

ಪಾಕಿಸ್ತಾನದ ಉಗ್ರ ಅಜರ್‌ ಮಸೂದ್‌ನನ್ನು ಬಿಜೆಪಿಯೇ ಬಿಟ್ಟು ಬಂದಿದ್ದು ಎಂಬ ರಾಹುಲ್‌ ಹೇಳಿಕೆ ಸರಿಯಲ್ಲ. ಅಂದಿನ ಪರಿಸ್ಥಿತಿ ಬಗ್ಗೆ ಅರಿವಿರಲಿ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next