Advertisement

ಕರ್ತವ್ಯಕ್ಕೆ ಅಡ್ಡಿ ;ಶಾಸಕ ಸೈಲ್‌ ವಿರುದ್ಧ ಐಟಿಯಿಂದ ದೂರು ದಾಖಲು

04:44 PM May 14, 2018 | |

ಕಾರವಾರ : ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಕಾರವಾರ ಕಾಂಗ್ರೆಸ್‌ ಶಾಸಕ, ಅಭ್ಯರ್ಥಿ ಸತೀಶ್‌ ಸೈಲ್‌ ವಿರುದ್ದ  ಅಂಕೋಲಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

Advertisement

ಅಂಕೋಲಾದ ಆವರ್ಸಾ ಗ್ರಾಮದಲ್ಲಿ  ಸೈಲ್‌ ಅವರ ಆಪ್ತ ಮಂಗಲದಾಸ್‌ ಕಾಮತ್‌ ಅವರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್‌ 353 ಮತ್ತು  506 ರ ಅಡಿ ಪ್ರಕರಣ ದಾಖಲಿಸಲಾಗಿದೆ. 

ದಾಳಿ ವೇಳೆ ಮನೆಯ ಬಳಿ ಬಂದಿದ್ದ ಸೈಲ್‌ ಕಾರನ್ನು ತಪಾಸಣೆ ಮಾಡಲು ಬಿಡದೆ ಸ್ಥಳದಿಂದ ವೇಗವಾಗಿ ಕಾರು ಚಲಾಯಿಸಿ ತೆರಳಿದ್ದರು, ಈ ಹಿನ್ನಲೆಯಲ್ಲಿ ದೂರು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next