Advertisement

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮನೆ ಮೇಲೂ ಐಟಿ ದಾಳಿ

12:20 PM Oct 10, 2019 | Mithun PG |

ಚಿಕ್ಕಬಳ್ಳಾಪುರ:  ವಿಧಾನಸಭಾ  ಉಪಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿರುವ  ಮಾಜಿ ಸಂಸದ ಆರ್.ಎಲ್.ಜಾಲಪ್ಪ ಸೋದರಳಿಯ ಉದ್ಯಮಿ ಜಿ ಹೆಚ್ ನಾಗರಾಜ್ ಮನೆ ಮೇಲೆ ಐಟಿ‌ ಅಧಿಕಾರಿಗಳು  ದಾಳಿ ನಡೆಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ನಗರದ ಪ್ರಶಾಂತ ನಗರದಲ್ಲಿರುವ ಮಾತೃ ಮಂದಿರ ಮೇಲೆ ಬೆಂಗಳೂರುನಿಂದ ಆಗಮಿಸಿರುವ 10 ಕ್ಕೂ ಹೆಚ್ಚು ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಕೋಲಾರದಲ್ಲಿರುವ ಜಾಲಪ್ಪ ಮೆಡಿಕಲ್ ಕಾಲೇಜ್ ಕಾರ್ಯದರ್ಶಿಯಾಗಿ ಜಿ‌.ಹೆಚ್ ನಾಗರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ.ಕೆ.ಸುಧಾಕರ್ ಶಾಸಕ ಸ್ಥಾನದಿಂದ ಅನರ್ಹಗೊಂಡ ಬಳಿಕ ಘೋಷಣೆಯಾಗಿರುವ   ಚಿಕ್ಕಬಳ್ಳಾಪುರ ಉಪಚುನಾವಣೆಗೆ ಜಿ.ಹೆಚ್. ನಾಗರಾಜ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

ಇದೇ ವೇಳೆ ಸೋಮೇಶ್ವರ ಬಡವಣೆಯಲ್ಲಿರುವ ಆರ್.ಎಲ್ ಜಾಲಪ್ಪ  ಅವರ ಮೂರನೇ ಪುತ್ರ ಜೆ. ರಾಜೇಂದ್ರ  ಅವರ ಮನೆ ಹಾಗೂ ನಗರದ ಹೊರವಲಯದಲ್ಲಿರುವ ಆರ್.ಎಲ್ ಜಾಲಪ್ಪ ತಾಂತ್ರಿಕ ವಿವಿಯಲ್ಲಿನ ಕಚೇರಿಯಲ್ಲಿ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next