Advertisement

ಡಾ|ಹೆಡಗೇವಾರ್‌ ಮ್ಯೂಸಿಯಂ ಪ್ರವೇಶಿಸಿದ ವೀಡಿಯೋ ಇದೆಯೇ?-ನಾಯಕರಿಗೆ ಗೂಳಿಹಟ್ಟಿ ಶೇಖರ್‌ ಸವಾಲು

11:26 PM Dec 09, 2023 | Team Udayavani |

ಚಿತ್ರದುರ್ಗ: ಮಹಾರಾಷ್ಟ್ರದ ನಾಗಪುರದಲ್ಲಿ ಡಾ| ಹೆಡಗೇವಾರ್‌ ಮ್ಯೂಸಿಯಂ ಒಳಗೆ ನಾನು ಪ್ರವೇಶ ಮಾಡಿರುವ ಸಿಸಿಟಿವಿ ವೀಡಿಯೋ ಇದ್ದರೆ ಬಿಡುಗಡೆ ಮಾಡುವಂತೆ ಹೊಸದುರ್ಗ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್‌ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದಾರೆ.

Advertisement

ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎನ್ನುವ ಕಾರಣಕ್ಕೆ ಆರೆಸ್ಸೆಸ್‌ ಕೇಂದ್ರ ಕಚೇರಿ ನಾಗಪುರದಲ್ಲಿರುವ ಡಾ| ಹೆಡಗೇವಾರ್‌ ಮ್ಯೂಸಿಯಂಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಗೂಳಿಹಟ್ಟಿ ಶೇಖರ್‌ ಮೂರು ದಿನಗಳ ಹಿಂದೆ ಆಡಿಯೋ ಮೂಲಕ ಆರೋಪಿಸಿದ್ದರು. ಈ ಸಂಬಂಧ ಆರೆಸ್ಸೆಸ್‌ ಬೆಂಗಳೂರು ಘಟಕದಿಂದ ಸ್ಪಷ್ಟೀಕರಣ ನೀಡಲಾಗಿತ್ತು. ಇದೇ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸಹಿತ ಹಲವು ನಾಯಕರು ಗೂಳಿಹಟ್ಟಿ ಶೇಖರ್‌ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಸಂಬಂಧ ಮತ್ತೂಮ್ಮೆ ಆಡಿಯೋ ಮೂಲಕ ಸವಾಲು ಹಾಕಿರುವ ಗೂಳಿಹಟ್ಟಿ ಶೇಖರ್‌, ನನಗೆ ಈ ವಿಷಯವನ್ನು ಬೆಳೆಸಲು ಇಷ್ಟವಿರಲಿಲ್ಲ. ನನಗೆ ಅಭಿಮಾನವಿದೆ. ಯಾರೋ ಹೇಳಿಕೊಟ್ಟಿದ್ದಾರೆ ಎಂದು ಮಾತನಾಡಲು ನಾನು ಸಣ್ಣ ಹುಡುಗನಲ್ಲ. ನಾನು ಅಲ್ಲಿಗೆ ಹೋಗಿದ್ದ ಸಿಸಿಟಿವಿ ತುಣುಕು ಇದ್ದರೆ ಬಿಡುಗಡೆ ಮಾಡಿಸಿ. ಮಾಡಿದ್ದೇ ಆದಲ್ಲಿ ನಾನು ನಿಮ್ಮ ಮನೆಗಳಲ್ಲಿ ಕಸ ಗುಡಿಸುವ ಮತ್ತು ಗೇಟ್‌ ಕಾಯುವ ಕೆಲಸ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಎಂಟು ತಿಂಗಳ ಹಿಂದೆಯೇ ಈ ವಿಷಯವನ್ನು ನಾನು ಹೇಳಿದ್ದರೆ ಇನ್ನೊಂದಿಷ್ಟು ಸೀಟುಗಳನ್ನು ಕಳೆದುಕೊಳ್ಳುತ್ತಿದ್ದಿರಿ. ಹಾಗಾಗಿ ನೀವೆಲ್ಲ ಯಾರನ್ನೋ ಮೆಚ್ಚಿಸಲು ಮಾತನಾಡಬೇಡಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌, ಎಸ್‌.ಸುರೇಶ್‌ಕುಮಾರ್‌, ಮಾಜಿ ಶಾಸಕ ಪಿ.ರಾಜೀವ್‌, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮುಂತಾದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next