ನೊಂದಿದ್ದಾರೆ. ಆದ್ದರಿಂದ ನಿವೃತ್ತಿ ಹೇಳಲು ಚಿಂತಿಸಿರಬಹುದು. ಅದೇ ಕಾರಣದಿಂದ ನೆನಪಿಗಾಗಿ ಚೆಂಡನ್ನು ಅಂಪೈರ್ಗಳಿಂದ ಕೇಳಿ ಪಡೆದು
ಕೊಂಡಿದ್ದಾರೆ ಎಂದು ಲೆಕ್ಕಾಚಾರ ಮಾಡಿದ್ದಾರೆ. ಧೋನಿ 2014ರಲ್ಲಿ ದಿಢೀರನೆ ಟೆಸ್ಟ್ ಕ್ರಿಕೆಟ್ಗೆ ರಾಜೀನಾಮೆ ಎಲ್ಲರನ್ನೂ ಆಘಾತಕ್ಕೆ ದೂಡಿದ್ದರು. ಅದೇ ರೀತಿ ಇಲ್ಲೂ ಆಗಬಹುದು ಎಂಬ ಊಹೆ ಅಭಿಮಾನಿಗಳದ್ದು.
Advertisement
ಆದರೆ ಧೋನಿ ಟೀಕೆಗಳಿಗೆ ಹೆದರಿ ರಾಜೀನಾಮೆ ಕೊಡುವ ವ್ಯಕ್ತಿಯಲ್ಲ. ಭಾರತದಲ್ಲಿ 2016ರಲ್ಲಿ ನಡೆದ ಟಿ20 ವಿಶ್ವಕಪ್ ಸೋತಾಗಲೂ ಅವರು ತಾನು 2019ರ ವಿಶ್ವಕಪ್ವರೆಗೆ ಆಡುತ್ತೆನೆಂದು ಸ್ಪಷ್ಟವಾಗಿ ಹೇಳಿದ್ದರು. ಅದೇ ಕಾರಣಕ್ಕೆ ಅವರು ಭಾರತ ತಂಡಕ್ಕೆ ಸತತವಾಗಿ ಆಯ್ಕೆಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಪರಿಗಣಿಸಿದರೆ ಟ್ವೀಟರ್ನಲ್ಲಿ ಅತಿರೇಕದ ಪ್ರತಿಕ್ರಿಯೆ ಬಂದಿದೆ ಎಂದು ಕೆಲವರು ವಿಶ್ಲೇಷಿಸುತ್ತಾರೆ.