Advertisement
ಅಯೋಧ್ಯೆಯ ಸ್ಥಳ ಮಾಲಕತ್ವ ತಗಾದೆ ಬಗ್ಗೆ ಮೂರನೇ ದಿನ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ನ್ಯಾಯಪೀಠ ರಾಮಲಲ್ಲಾ ವಿರಾಜಮಾನ್ ಪರ ನ್ಯಾಯವಾದಿ ಕೆ. ಪರಾಶರನ್ ಅವರನ್ನು ಹೀಗೆಂದು ಪ್ರಶ್ನಿಸಿದೆ.
Related Articles
Advertisement
ಸ್ವರ್ಗಕ್ಕಿಂತ ಹೆಚ್ಚು: ಜನ್ಮಸ್ಥಾನದ ಮಹತ್ವ ವಿವರಿಸುವ ನಿಟ್ಟಿನಲ್ಲಿ “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ (ತಾಯಿನಾಡು ಸ್ವರ್ಗಕ್ಕಿಂತ ಶ್ರೇಷ್ಠ) ಎಂಬ ಶ್ಲೋಕವನ್ನು ಪರಾಶರನ್ ಉಲ್ಲೇಖೀಸಿದರು. ಮುಸ್ಲಿಂ ಸಂಘಟನೆಗಳ ಪರ ವಾದಿಸಿದ ರಾಜೀವ್ ಧವನ್. ರಾಮ ಲಲ್ಲಾ ವಿರಾಜಮಾನ್ ಮತ್ತು ನಿರ್ಮೋಹಿ ಅಖಾಡಗಳೇ ಪರಸ್ಪರ ಸಂಘರ್ಷದಲ್ಲಿ ತೊಡಗಿವೆ ಎಂದರು.
ಹೀಗಾಗಿ, ಮುಸ್ಲಿಂ ಸಂಘಟನೆಗಳ ಪರವಾಗಿ ಮಂಡಿಸಬೇಕಾದ ವಾದ ವನ್ನು ಮುಂದೂಡುವುದು ಉತ್ತಮ ಎಂದು ಸಲಹೆ ನೀಡಿದರು. ಈ ನಡುವೆ, ಸಂಪ್ರದಾಯ ಮುರಿದು ಶುಕ್ರವಾರವೂ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ. ಸಾಮಾನ್ಯವಾಗಿ ಶುಕ್ರವಾರ ಹೊಸ ಕೇಸುಗಳ ವಿಚಾರಣೆ ಮಾತ್ರ ನಡೆಸಲಾಗುತ್ತದೆ.