Advertisement

ರಸ್ತೆ ನಿಯಮ ಉಲ್ಲಂಘಿಸಿದ್ರೆ ಇನ್ನು ವಿಮೆ ಮೊತ್ತ ದುಪ್ಪಟ್ಟು?

10:12 AM Sep 08, 2019 | sudhir |

ಪ್ರಥಮವಾಗಿ ದಿಲ್ಲಿಯಲ್ಲಿ ಜಾರಿಗೊಳಿಸಲು ಯೋಜನೆ

Advertisement

ಹೊಸದಿಲ್ಲಿ: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇದೀಗ ಭರ್ಜರಿ ದಂಡ ವಿಧಿಸುವುದು ಗೊತ್ತೇ ಇದೆ. ಇದರಿಂದಾಗಿ ದೇಶಾದ್ಯಂತ ಕಳೆದೆರಡು ದಿನಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ ಕೋಟಿ ರೂ. ದಾಟಿದೆ.

ಇದಷ್ಟೇ ಅಲ್ಲ, ನಿಯಮ ಉಲ್ಲಂಘಿಸಿದರೆ ಇನ್ನು ವಾಹನದ ವಿಮೆ ಮೊತ್ತ ದುಪ್ಪಟ್ಟಾಗುವ ಸಾಧ್ಯತೆ ದಟ್ಟವಾಗಿದೆ. ಇಂಥದ್ದೊಂದು ವಿನೂತನ ಪ್ರಸ್ತಾವನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾಡಿದೆ. ದೇಶದಲ್ಲೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲು ವಿಮಾ ಕಂಪೆನಿಗಳು ಉದ್ದೇಶಿಸಿವೆ. ಅದರಂತೆ ಐಆರ್‌ಡಿಎಐ ಸೆ.6ರಂದು ಘೋಷಣೆಯನ್ನೂ ಹೊರಡಿಸಿದೆ.

ವಿಮೆ ಮೊತ್ತ ಹೆಚ್ಚಳ ಕುರಿತು ಚರ್ಚೆ ನಡೆಸಿದ ಸಮಿತಿ ನಿಯಮ ಉಲ್ಲಂಘನೆ ಮಾಡಿದವರಿಗೆ ದುಪ್ಪಟ್ಟು ವಿಮೆ ವಿಧಿಸಬೇಕೆಂದು ಹೇಳಿದೆ. ಇದರಿಂದ ಅಪಘಾತ ಪ್ರಮಾಣಗಳು ಇಳಿಕೆಯಾಗಲಿವೆ ಎಂದು ಹೇಳಲಾಗಿದೆ. ಯೋಜನೆ ಪ್ರಕಾರ ನಿಯಮ ಉಲ್ಲಂಘನೆ ಮತ್ತು ವಿಮೆಗೆ ನೇರ ಸಂಪರ್ಕ ಇರಲಿದ್ದು, ನಿಯಮ ಉಲ್ಲಂಘಿಸಿದ ತಕ್ಷಣ ಅದು ಕಂಪೆನಿಗಳ ವ್ಯವಸ್ಥೆಗಳಲ್ಲಿ ದಾಖಲಾಗಲಿದೆ. ಅಲ್ಲದೇ ವಿಮೆ ಕಂಪೆನಿಗಳು, ಸಾರಿಗೆ ಇಲಾಖೆಯ ದತ್ತಾಂಶಗಳಲ್ಲೂ ಇದು ದಾಖಲಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next