Advertisement

ನೀರಾವರಿ ಮೂಲ ಪರಿಶೀಲನೆ

04:13 PM Sep 04, 2017 | |

ಶಿರಾಳಕೊಪ್ಪ: ತಾಲೂಕಿನ ಶಿರಾಳಕೊಪ್ಪ ಭಾಗದ ಉಡಗಣಿ- ತಾಳಗುಂದ ಹೋಬಳಿ ಸೇರಿದಂತೆ ತಾಲೂಕಿನ ಹಲವಾರು ನೀರಾವರಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ಮನವಿ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಇಲಾಖೆಯ ಮುಖ್ಯಸ್ಥರು ಹಾಗೂ ರಾಜ್ಯ ಅಧಿಕಾರಿಗಳು ಸಭೆ ನಡೆಸಿ ನೀರಾವರಿ ಮೂಲಗಳನ್ನು ವೀಕ್ಷಣೆಮಾಡಿದರು.

Advertisement

ಸಂಜೆ ಶಿರಾಳಕೊಪ್ಪ ಹತ್ತಿರದ ನೇರಲಗಿ ಸಮುದಾಯ ಭವನದಲ್ಲಿ ಬೃಹತ್‌ ಪ್ರಮಾಣದಲ್ಲಿ ಸೇರಿದ್ದ ರೈತರನ್ನುದ್ದೇಶಿಸಿ ಶಾಸಕ ಬಿ.ವೈ. ರಾಘವೇಂದ್ರ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ಭಾಗದ ರೈತರು ತೀವ್ರ ಬರಗಾಲದಿಂದ ಬಳಲುತ್ತಿದ್ದಾರೆ. ಈ ಭಾಗದಲ್ಲಿ ನೀರಾವರಿ ಮೂಲಗಳಿಲ್ಲ. ಕೊಳವೆ ಬಾವಿ ನಂಬಿದ್ದ ರೈತರಿಗೆ ಅಂತರ್ಜಲವಿಲ್ಲದೇ ಕೊಳವೆಬಾವಿಗಳು ಬತ್ತಿ ಹೋಗಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಂಭವವಿದೆ ಎಂದರು. 

ಕಳೆದ ವರ್ಷಕ್ಕಿಂತ ವಾಡಿಕೆಗಿಂತ ಶೇ.40ರಷ್ಟು ಮಳೆ ಕಡಿಮೆ ಆಗಿದೆ. ಮಳೆ ಪ್ರಮಾಣ ಕಡಿಮೆ ಆಗುತ್ತಿರುವದನ್ನು ನೋಡಿ ಈ ಹಿಂದೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಶಿರಾಳಕೊಪ್ಪದಿಂದ 5 ಸಾವಿರ ರೈತರ ಪಾದಯಾತ್ರೆ ಕೈಗೊಳ್ಳಲಾಗಿತ್ತು. ಆದರೆ ಸರ್ಕಾರ ಯಾವದೇ ಸ್ಪಂದನೆ ಮಾಡಲಿಲ್ಲ ಎಂದರು. 

ಕೇಂದ್ರಕ್ಕೆ ಮನವಿ: ತಾಲ್ಲೂಕಿನ ರೈತರ ಹಿತ ಕಾಪಾಡಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ಸಂಸದ ಬಿ.ಎಸ್‌. ಯಡಿಯೂರಪ್ಪನವರು ಶಿಕಾರಿಪುರ ತಾಲೂಕಿನ ನಾಲ್ಕು ಹಾಗು ಸೊರಬ ತಾಲೂಕಿನ ಒಂದು ನೀರಾವರಿ ಯೋಜನೆಗೆ ಆ.26ರಂದು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಉಡಗಣಿ- ತಾಳಗುಂದ ಹೋಬಳಿ, ನೀರಾವರಿಗೆ 300 ಕೋಟಿ ರೂ., ತುಂಗಾ ನದಿಯಿಂದ ಕುಮದ್ವತಿ ನದಿಗೆ ನೀರು ತುಂಬಿಸುವ ಯೋಜನೆಗೆ 125 ಕೋಟಿ ರೂ., ತುಂಗಭದ್ರಾ ನದಿಯಿಂದ ಹೊಸೂರು ಹೋಬಳಿಗೆ ನೀರು ಪೂರೈಸುವ ಯೋಜನೆಗೆ 200 ಕೋಟಿ ಹಾಗು ಕಲ್ಲೊಡ್ಡು ಯಜನೆಗೆ 100 ಕೋಟಿ ರೂ ಪ್ರಸ್ತಾವನೆ ಸಲ್ಲಿಸಿದ್ದರು.

ನಾಲ್ಕು ದಿನದಲ್ಲಿ ಕೇಂದ್ರ ಸಮಿತಿ ಆಗಮನ: ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಂಸದ ಯಡಿಯೂರಪ್ಪ ಅವರು ನೀರಾವರಿ ಸಚಿವೆ ಉಮಾಭಾರತಿ ಅವರಿಗೆ ನೀರಾವರಿ ಸೌಲಭ್ಯದ ಬಗ್ಗೆ ಮನವಿ ಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ನೀರಾವರಿ ಸಚಿವೆ ಉಮಾಭಾರತಿ ಅವರು ನಾಲ್ಕೇ ದಿನದಲ್ಲಿ ಉನ್ನತ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿರುವುದು ಒಂದು ದಾಖಲೆ ಆಗಿದೆ ಎಂದು ಶಾಸಕ ರಾಘವೇಂದ್ರ ಸಂತಸ ವ್ಯಕ್ತಪಡಿಸಿ, ನಾವು ಕಾಟಾಚಾರಕ್ಕಾಗಿ ಕೆಲಸ ಮಾಡದೇ ಆದಷ್ಟು ಬೇಗ ಯೋಜನೆಯನ್ನು ಕಾರ್ಯಗತ ವಾಗಲು ಪ್ರಯತ್ನಪಡಲಾಗುವುದು ಎಂದರು.

Advertisement

ಸ್ಥಳಕ್ಕೆ ಭೇಟಿ ನೀಡಲು ಆಗಮಿಸಿದ ಕೇಂದ್ರ ನೀರಾವರಿ ಯೋಜನೆಯ ಮುಖ್ಯ ಅಭಿಯಂತರ ಆರ್‌.ಕೆ. ಜೈನ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ಇಲ್ಲಿಯ ಪರಿಸ್ಥಿತಿ ನಮ್ಮ  ಮನಕ್ಕೆ ಬಂದಿದೆ. ಯಡಿಯೂರಪ್ಪನವರು ಕೇಂದ್ರ ಸಚಿವೆ ಉಮಾಭಾರತಿ ಅವರಿಗೆ ಮನವಿ ಕೊಟ್ಟ ಬೆನ್ನಲ್ಲೇ ಕರ್ನಾಟಕಕ್ಕೆ ಭೇಟಿ ಕೊಟ್ಟು ಸರ್ವೆ ಮಾಡಿಕೊಂಡು ಬರಲು ತಿಳಿಸಿದ ಹಿನ್ನೆಲೆಯಲ್ಲಿ ಬಂದದ್ದಾಗಿ ತಿಳಿಸಿ, ಇಲ್ಲಿಯ ನೀರಾವರಿ ಯೋಜನೆಬಗ್ಗೆ ಪೂರಕ ವರದಿ ನೀಡಿ
ಸಂಪೂರ್ಣ ಸ್ಪಂದಿಸುವದಾಗಿ ತಿಳಿಸಿದರು.

ಹಿರೇಕೆರೂರ ತಾಲೂಕು ಪುರಕ್ಕೆ ಭೇಟಿ:
ಶಿಕಾರಿಪುರ ತಾಲೂಕಿನ ಹೊಸೂರು ಹೋಬಳಿಗೆ ನೀರು ತರುವ ತುಂಗಭದ್ರಾ ನದಿ ಹರಿಯುವ ಪುರಕ್ಕೆ ಶಾಸಕರೊಂದಿಗೆ ಕೇಂದ್ರ ಸಮಿತಿ ಭೇಟಿ ನೀಡಿ ಮಳೆಯಲ್ಲಿಯೇ ಅಲ್ಲಿಯ ನೀರಿನ ಸೌಲಭ್ಯವನ್ನು ವೀಕ್ಷಿಸಿ ತಾಲೂಕಿಗೆ ಬೇಕಾಗುವ ಎಲ್ಲ ನೀರನ ಸೌಲಭ್ಯವನ್ನು ಇಲ್ಲಿಂದಲೇ ಏಕೆ ವ್ಯವಸ್ಥೆ ಮಾಡಬಾರದು ಎಂದು ಚಿಂತಿಸಿ ಸೊಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

 ಜಿಲ್ಲಾ ಜಾಗೃತ ದಳದ ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಭಾಗದ ಯಾವದೇ ಕೆರೆಕಟ್ಟೆಯಲ್ಲಿ ನೀರಿಲ್ಲ ಎಂದರು. ಶಿರಾಳಕೊಪ್ಪ ಪಟ್ಟಣದ ಬಿಜೆಪಿಯಿಂದ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಕೇಂದ್ರ ನಿಯೋಗದೊಂದಿಗೆ ತಂಡದ
ಹಿರಿಯ ಇಂಜನಿಯರ್‌ ಪಂಕಜ್‌ ಶರ್ಮ,ಫ‌ಣಿರಾಜ್‌, ಕರ್ನಾಟಕದ ನೀರಾವರಿ ಮುಖ್ಯ ಅಭಿಯಂತರ ಕುಲಕರ್ಣಿ, ತುಂಗಾ ಮೇಲ್ದಂಡೆ ಯೋಜನೆಯ ಇಂಜನಿಯರ್‌ ಶ್ರೀನಿವಾಸ್‌, ನಿವೃತ್ತ ಅಭಿಯಂತರ ನಾಗರಾಜ್‌ , ರಮೇಶ್‌ ಹಾಗೂ ಜಿಪಂ ಸದಸ್ಯರಾದ ಅಕ್ಷತಾ, ರೇಣುಕಮ್ಮ, ಮಮತಾ ಸಾಲಿ, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ರೇವಣಪ್ಪ, ಗುರುಮೂರ್ತಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ, ಮಂಚಿ ಶಿವಣ್ಣ, ಚೆನ್ನವೀರ ಶೆಟ್ಟಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next