Advertisement

ನದಿ ನೀರಿನ ವಿರುದ್ಧ ಬೇಜವಾಬ್ದಾರಿ ವರ್ತನೆ ಸ್ಥಳೀಯರಿಂದ ಜೀಪ್ ಚಾಲಕನ ರಕ್ಷಣೆ

10:17 AM Oct 20, 2019 | sudhir |

ಬೆಳ್ತಂಗಡಿ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಬೆಳ್ತಂಗಡಿ ತಾಲೂಕಿನಲ್ಲಿ ಶನಿವಾರವು ಮುಂದುವರಿದಿದೆ.

Advertisement

ಕುಕ್ಕಾವು ಪ್ರದೇಶದಲ್ಲಿ ಉಕ್ಕಿ ಹರಿವ ನದಿ ನೀರಿನ ವಿರುದ್ಧ ಬೇಜವಾಬ್ದಾರಿಯಾಗಿ ಜೀಪನ್ನು ದಾಟಿಸುವ ಪ್ರಯತ್ನ ನಡೆಸುವ ವೇಳೆ ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ಘಟನೆ ಸಂಭವಿಸಿದೆ.

ಕುಕ್ಕಾವು ಕೂಡಬೆಟ್ಟು ಹಳ್ಳ ಮತ್ತು ಏಳುವರೆ ಹಳ್ಳ ಸೇರುವ ಪ್ರದೇಶದಲ್ಲಿ ಉಜಿರೆ ಸುರ್ಯ ಸಮೀಪದ ನಿವಾಸಿಯೋರ್ವರು ಬೆಳಗ್ಗೆ ನದಿ ದಾಟಿದ್ದರು.
ಸಂಜೆ ಹಿಂತಿರುಗುವ ವೇಳೆಗೆ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿತ್ತು. ಚಾಲಕ ಜೀಪನ್ನು ನದಿ ದಾಟಿಸಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿತ್ತು.

ಬಳಿಕ ಸ್ಥಳೀಯರ ನೆರವಿನೊಂದಿಗೆ ಹಗ್ಗದ ನೆರವಿನಿಂದ ಬೇರೆ ವಾಹನದಿಂದ ಎಳೆದು ಜೀಪನ್ನು ಮೇಲಕ್ಕೆ ತರಲಾಗಿದೆ.

ತಾಲೂಕಿನ ಹೆಚ್ಚಿನ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಗುಡುಗು ಮಳೆ ಆರಂಭಗೊಂಡಿದ್ದು ರಾತ್ರಿಯೂ ಮುಂದುವರಿದಿದೆ. ಇಂತಹಾ ಸಮಯದಲ್ಲಿ ದುಸ್ಸಾಹಸಕ್ಕೆ ಮುಂದಾದ ಚಾಲಕನ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next