Advertisement

ರಾಹುಲ್‌ ಬಗ್ಗೆ ವ್ಯಂಗ್ಯ

12:30 AM Mar 03, 2019 | Team Udayavani |

ಉಮಾರಿಯಾ: “ಚುನಾವಣೆ ನಡೆಯುವುದು ಬಲಿಷ್ಠ ಭಾರತ ಮತ್ತು ಬಲಿಷ್ಠ ಆರ್ಥಿಕತೆಯನ್ನು ಸೃಷ್ಟಿಸಲೇ ಹೊರತು, ಪ್ರಧಾನಿ ಹುದ್ದೆಗೇರುವ ರಾಜಕುಮಾರನ ಆಸೆಯನ್ನು ಈಡೇರಿಸುವುದಕ್ಕಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಶನಿವಾರ ಮಧ್ಯಪ್ರದೇಶದಲ್ಲಿ ಬಿಜೆಪಿ ವಿಜಯ ಸಂಕಲ್ಪ ಬೈಕ್‌ ರ್ಯಾಲಿ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೆಸರೆತ್ತದೇ ವ್ಯಂಗ್ಯವಾಡಿದ್ದಾರೆ. ಇದೇ ವೇಳೆ, ವಾಯುಪಡೆ ದಾಳಿ ಬಗ್ಗೆ ಪ್ರಸ್ತಾಪಿಸಿದ ಅವರು, ನಮ್ಮ ಸೈನಿಕರ ರಕ್ತಕ್ಕೆ ಪ್ರತೀಕಾರ ತೀರಿಸುವ ಧೈರ್ಯ ನಿಮಗಿಲ್ಲ. ಮೋದಿಜೀ ಅದನ್ನು ಮಾಡಿದರೆ, ಅದನ್ನೇ ಪ್ರಶ್ನೆ ಮಾಡುತ್ತೀರಿ. ಇದು ಕೀಳುಮಟ್ಟದ ರಾಜಕೀಯ ಎಂದೂ ಶಾ ಕಿಡಿಕಾರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next