Advertisement

ಕಳ್ಳರನ್ನು ಹಿಡಿಯಲು ಹೋದ ಆಂಧ್ರ ಪೋಲೀಸರ ಮೇಲೆ ಇರಾನಿ ಗ್ಯಾಂಗ್ ಹಲ್ಲೆ: ಕಳ್ಳರ ತಂಡ ಪರಾರಿ

01:50 PM Nov 26, 2020 | sudhir |

ಧಾರವಾಡ: ಆಂಧ್ರದಲ್ಲಿ ಕಳ್ಳತನ ಪ್ರಕರಣ ಹಿನ್ನೆಲೆಯಲ್ಲಿ ಕಳ್ಳರನ್ನು ಹಿಡಿಯಲು ಬಂದ ಆಂಧ್ರ ಪೊಲೀಸರ ಮೇಲೆ ಇರಾನಿ ಗ್ಯಾಂಗ್ ನ ಕಳ್ಳರ ತಂಡ ಹಲ್ಲೆನಡೆಸಿದ ಘಟನೆ ಗುರುವಾರ ನಡೆದಿದೆ.

Advertisement

ಧಾರವಾಡದ ಸಂಗಮ್ ವೃತ್ತದ ಬಳಿ ಇರುವ ಲೈನ್ ಬಝಾರ್ ಹನುಮಂತ ದೇವಸ್ಥಾನದ ಎದುರು ಘಟನೆ ನಡೆದಿದ್ದು ಇರಾನಿ ಗ್ಯಾಂಗ್ ನ ಕಳ್ಳರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಮೊದಲು ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿರೋ ಇರಾನಿ ಗ್ಯಾಂಗ್ ಕೊನೆಗೆ ತಮಗೆ ತಾವೇ ಬಿಯರ್ ಬಾಟಲಿಯಿಂದ ಇರಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಯಡಿಯೂರಪ್ಪ ಅವರ ಸ್ಥಿತಿ ಮುಳ್ಳಿನ ಮೇಲಿನ ಬಟ್ಟೆಯಂತೆ ಆಗಿದೆ : ಶ್ರೀನಿವಾಸ್‌ ಪ್ರಸಾದ್

ಘಟನೆಯಿಂದ ಪೊಲೀಸರಿಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಸ್ಥಳಕ್ಕೆ ಧಾರವಾಡ ಎಸಿಪಿ ಅನುಷಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ

Advertisement

Udayavani is now on Telegram. Click here to join our channel and stay updated with the latest news.

Next