Advertisement

IPS: ಕೊಯಮತ್ತೂರು ಡಿಐಜಿ ವಿಜಯ್‌ ಕುಮಾರ್‌ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣು

10:30 AM Jul 07, 2023 | Team Udayavani |

ಚೆನ್ನೈ: ಕೊಯಮತ್ತೂರು ವ್ಯಾಪ್ತಿಯ ಡೆಪ್ಯುಟಿ ಇನ್ಸ್‌ ಪೆಕ್ಟರ್‌ ಜನರಲ್‌ (DIG) ಶ್ರೇಣಿಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:Chikkamagaluru: ಮನೆ ಮುಂದೆ ಕುಸಿದ ಧರೆ; ಕೂದಲೆಳೆ ಅಂತರದಲ್ಲಿ ಪಾರಾದ ವ್ಯಕ್ತಿ

ನಗರದ ರೆಡ್‌ ಫೀಲ್ಡ್ಸ್‌ ನಿವಾಸದಲ್ಲಿ ಡಿಐಜಿ ಸಿ ವಿಜಯ್‌ ಕುಮಾರ್‌ ಅವರು ತಮ್ಮ ಸರ್ವೀಸ್‌ ಪಿಸ್ತೂಲ್‌ ನಿಂದ ಗುಂಡು ಹೊಡೆದುಕೊಂಡು ಸಾವನ್ನಪ್ಪಿರುವುದಾಗಿ ಶಂಕಿಸಲಾಗಿದೆ. ಸಾವಿನ ಕಾರಣ ಇನ್ನಷ್ಟೇ ತಿಳಿದುಬರಬೇಕಾಗಿದೆ ಎಂದು ವರದಿ ವಿವರಿಸಿದೆ.

2009ರ ಬ್ಯಾಚ್‌ ನ ಐಪಿಎಸ್‌ ಅಧಿಕಾರಿಯಾಗಿರುವ ವಿಜಯ್‌ ಕುಮಾರ್‌ ಅವರು ಜನವರಿಯಲ್ಲಿ ಡಿಐಜಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇದಕ್ಕೂ ಮೊದಲು ಚೆನ್ನೈನ ಅಣ್ಣಾನಗರದಲ್ಲಿ ಡೆಪ್ಯುಟಿ ಪೊಲೀಸ್‌ ಕಮೀಷನರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಕಾಂಚೀಪುರಂ, ಕಡಲೂರು, ನಾಗಪಟ್ಟಣಂ ಮತ್ತು ತಿರುವರೂರ್‌ ಜಿಲ್ಲೆಗಳಲ್ಲಿ ವಿಜಯ್‌ ಕುಮಾರ್‌ ಅವರು ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ತಮಿಳುನಾಡಿನಲ್ಲಿ ಹಿರಿಯ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ ಶರಣಾಗಿರುವ ಎರಡನೇ ಪ್ರಕರಣ ಇದಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next