Advertisement

ಮುಂಬೈ ಬೌಲಿಂಗ್ ಗೆ ಬೆದರಿದ ಧೋನಿ ಬಾಯ್ಸ್ : 115 ರ ಕನಿಷ್ಠ ಸವಾಲು

09:15 PM Oct 23, 2020 | Suhan S |

ಶಾರ್ಜಾ : ಟಾಸ್ ಗೆದ್ದು ಬೌಲಿಂಗ್ ಆಯ್ದಯಕೊಂಡ ಮುಂಬೈ ತಂಡ ತನ್ನ ಬೌಲಿಂಗ್ ನಿಂದ ಚೆನ್ನೈ ಬ್ವಾಟಿಂಗ್  ಅಬ್ಬರವನ್ನು ಕಟ್ಟಿ ಹಾಕುವಲ್ಲಿ ಯಶಸ್ಸಾಗಿದೆ. ಚೆನ್ನೈ 9 ವಿಕೆಟ್ ನಷ್ಟಕ್ಕೆ 114 ರನ್ ಪೇರಿಸಿ 115 ರ ಕನಿಷ್ಠ ಗುರಿಯನ್ನು ಮುಂಬೈಗೆ ಬಿಟ್ಟು ಕೊಟ್ಟಿದೆ.

Advertisement

ವ್ಯಾಟ್ಸನ್ ಜಾಗಕ್ಕೆ ತಂಡ ಸೇರಿಕೊಂಡ ರುತುರಾಜ್ ಗಾಯಕವಾಡ್ ಪ್ರಾರಂಭದಲ್ಲೇ ಬೌಲ್ಟ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಫಾಫ್ ಡು ಪ್ಲೆಸಿಸ್ ಕೇವಲ 1 ರನ್ ಗಳಿಸಿ ಬೌಲ್ಟ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಜಸ್ಪ್ರೀತ್ ಬುಮ್ರಾ ಎಂದಿನಂತೆ ತನ್ನ ಮ್ಯಾಜಿಕ್ ಸ್ಪೆಲ್ ನಿಂದ ಅಂಬಾಟಿ ರಾಯುಡು ಹಾಗೂ ಎನ್ ಜಗದೀಸನ್ ಅವರ ವಿಕೆಟ್ ನ್ನು ಪಡೆದು ಚೆನ್ನೈ ತಂಡವನ್ನು ಮತ್ತಷ್ಟು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸಿದರು. ವಿಕೆಟ್ ಉಳಿಸಿ ಮೊತ್ತ ಬೆಳೆಸುವ ಜಾಣ್ಮೆ ನಡಿಗೆಯಲ್ಲಿ ಬ್ಯಾಟ್ ಬೀಸುತ್ತಿದ್ದ ನಾಐಕ ಧೋನಿ 16 ರನ್ ಗಳಿಸಿ ರಾಹುಲ್ ಚಹರ್ ಎಸೆತದಲ್ಲಿ ಕೀಪರ್ ಕೈ ಗೆ ಕ್ಯಾಚ್ ಕೊಟ್ಟು ಸಾಗಿದರು.ಜಡೇಜಾ 7 ರನ್ ಗಳಿಸಿ ಬೌಲ್ಟ್ ಎಸೆತದಲ್ಲಿ ಔಟ್ ಆದರು.

ಒತ್ತಡದ ಪರಿಸ್ಥಿತಿಯಲ್ಲಿ ಬ್ಯಾಟಿಂಗಿಳಿದ ಸ್ಯಾಮ್ ಕರನ್ ತಂಡಕ್ಕೆ 52 ರನ್ ಗಳ ಆಸರೆಯ ಆಟ ನೀಡಿ ಸ್ಕೋರ್ ಬೋರ್ಡ್ ಚೇತರಿಕೆಗೆ ನೆರವಾದರು.ಶಾರ್ದೂಲ್ ಠಾಕೂರು ಸ್ಯಾಮ್ ಕರನ್ ಗೆ ಜೊತೆಯಾಗಿ 11 ರನ್ ಗಳಿಸಿ ನಾಥನ್ ಕೌಲ್ಟರ್-ನೈಲ್ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಚೆನ್ನೈ ತಂಡ ನಿಗದಿತ 20 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 114 ರನ್ ಪೇರಿಸಿ 115 ರ ಸವಾಲನ್ನು ನೀಡಿದೆ.

ಮುಂಬೈ ಪರ ಮಿಂಚಿದ ಟ್ರೆಂಟ್ ಬೌಲ್ಟ್  ಒಂದು ರನ್ ರಹಿತ ಓವರ್ ಸಹಿತ 3 ಪ್ರಮುಖ ವಿಕಟ್ ಗಳನ್ನು ಪಡೆದರು. ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹರ್ ತಲಾ 2 ವಿಕೆಟ್ ಪಡೆದರು. ನಾಥನ್ ಕೌಲ್ಟರ್-ನೈಲ್ 1 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next