Advertisement

ಐಪಿಎಲ್‌ ನಿರ್ವಹಣೆ ತೃಪ್ತಿ ನೀಡಿಲ್ಲ: ಅರ್ಷದೀಪ್‌ ಸಿಂಗ್‌

11:28 PM Apr 30, 2022 | Team Udayavani |

ಪುಣೆ: ಅರ್ಷದೀಪ್‌ ಸಿಂಗ್‌ ಇಷ್ಟರವರೆಗೆ ಆಡಿದ 9 ಐಪಿಎಲ್‌ ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ ಪಡೆದಿದ್ದಾರೆ.

Advertisement

ಆದರೆ ಡೆತ್‌ ಓವರ್‌ಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಈ ವೇಗಿಯ ಬೌಲಿಂಗ್‌ ಅಮೋಘವಾಗಿದೆ. ಈ ಕಾರಣಕ್ಕಾಗಿ ಕ್ರಿಕೆಟ್‌ ಪಂಡಿತರು ಅವರನ್ನು ಭಾರತೀಯ ಟಿ20 ವಿಶ್ವಕಪ್‌ ತಂಡಕ್ಕೆ ಸೇರ್ಪಡೆಗೊಳಿಸುವಂತೆ ಸೂಚಿಸಿದ್ದಾರೆ.

ನನಗೆ ಸಂತೋಷವಾಗಿದೆ. ಆದರೆ ಆಟಗಾರರಿಗೆ ತೃಪ್ತಿಯಾಗುವ ಪ್ರಶ್ನೆಯೇ ಇಲ್ಲ. ಐಪಿಎಲ್‌ನಲ್ಲಿ ನನ್ನ ನಿರ್ವಹಣೆ ತೃಪ್ತಿಕರವಾಗಿಲ್ಲ. ಇನ್ನಷ್ಟು ಉತ್ತಮ ನಿರ್ವಹಣೆ ನೀಡಬೇಕಾದ ಅಗತ್ಯವಿದೆ ಎಂದು ಅರ್ಷದೀಪ್‌ ಹೇಳಿದ್ದಾರೆ.

ಅವಕಾಶ ಲಭಿಸಿದಾಗ ತಂಡದ ಪರ ನಿರ್ವಹಣೆ ನೀಡಲು ಸಾಧ್ಯವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ ಎಂದವರು ಹೇಳಿದ್ದಾರೆ.

ಅರ್ಷದೀಪ್‌ ಇರುವ ಪಂಜಾಬ್‌ ತಂಡ ಶುಕ್ರವಾರದ ಐಪಿಎಲ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 20 ರನ್ನುಗಳಿಂದ ಸೋತಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next