Advertisement
ಬೆಂಗಳೂರು ತಂಡದ ತಾರೆ ವಿರಾಟ್ ಕೊಹ್ಲಿ ತಮ್ಮ ಎಂದಿನ ಶೈಲಿಯ ಬ್ಯಾಟಿಂಗ್ಗೆ ಮರಳಿದ್ದಾರೆ. ಚಿನ್ನಸ್ವಾಮಿಯಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸ್ಫೋಟಕ 77 ರನ್ ಗಳಿಸಿದ್ದಾರೆ. ಇದು ಆರ್ಸಿಬಿಗೆ ಸಂತಸ ತರಿಸಿರಬಹುದು. ಆದರೆ ತಂಡದ ಮುಂದಿರುವ ಸವಾಲುಗಳು ದೊಡ್ಡದೇ ಇವೆ. ಮುಖ್ಯವಾಗಿ ನಾಯಕ ಫಾ ಡು ಪ್ಲೆಸಿಸ್, ಪ್ರಮುಖ ಬ್ಯಾಟ್ಸ್ಮನ್ಗಳಾದ ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್ ಮಿನುಗಿಲ್ಲ. ಇದು ಹೀಗೆಯೇ ಮುಂದುವರಿದರೆ ಅಪಾಯ ಕಟ್ಟಿಟ್ಟಿದ್ದು.
Related Articles
ಚಿನ್ನಸ್ವಾಮಿ ಮೈದಾನ ಚಿಕ್ಕದಾಗಿರುವು ದರಿಂದ ಭಾರೀ ಪ್ರಮಾಣದ ರನ್ ಹರಿದು ಬರುವುದು ಸಾಮಾನ್ಯ. ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ದೊಡ್ಡ ಮೊತ್ತ ಪೇರಿಸುವ ಸವಾಲಿರುತ್ತದೆ. ಸಾಮಾನ್ಯವಾಗಿ ಚಿನ್ನಸ್ವಾಮಿ ಸ್ನೇಹಿ ಪಿಚ್. ಕಳೆದ ಪಂದ್ಯದಲ್ಲಿ ಸ್ಪಿನ್ನರ್ಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದರು. ರನ್ ಬೆನ್ನತ್ತಿದ ಆರ್ಸಿಬಿ ಗೆಲುವು ಸಾಧಿಸಿತ್ತು.
Advertisement
ಸಂಭಾವ್ಯ ತಂಡಗಳು
ಬೆಂಗಳೂರು: ಪ್ಲೆಸಿಸ್ (ನಾಯಕ), ಕೊಹ್ಲಿ, ಪಾಟಿದಾರ್, ಮ್ಯಾಕ್ಸ್ವೆಲ್, ಗ್ರೀನ್, ಕಾರ್ತಿಕ್, ರಾವತ್, ಡಾಗರ್, ಜೋಸೆಫ್/ಟಾಪ್ಲೆ, ಸಿರಾಜ್, ದಯಾಳ್.ಕೆಕೆಆರ್: ಸಾಲ್ಟ್, ಎಸ್.ನಾರಾಯಣ್, ವಿ.ಅಯ್ಯರ್, ಶ್ರೇಯಸ್ (ನಾಯಕ), ನಿತೀಶ್, ರಮಣ್ದೀಪ್, ರಿಂಕು, ರಸೆಲ್, ಸ್ಟಾರ್ಕ್, ಹರ್ಷಿತ್, ಚಕ್ರವರ್ತಿ.