Advertisement

ದೇಶಕ್ಕಾಗಿ ಆಡಿ ಸಹ ಆಟಗಾರರಿಗೆ ರೋಹಿತ್‌ ಕಿವಿಮಾತು

06:47 PM Feb 15, 2022 | Team Udayavani |

ಕೋಲ್ಕತಾ: ವಿಂಡೀಸ್‌ ವಿರುದ್ಧದ ಟಿ20 ಸರಣಿಗೆ ಮುನ್ನ ನಾಯಕ ರೋಹಿತ್‌ ಶರ್ಮಾ ಟೀಮ್‌ ಇಂಡಿಯಾ ಆಟಗಾರರಿಗೆ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್‌ಗೆ ಐಪಿಎಲ್‌ ಹರಾಜಿನ ಕುರಿತು ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಟೀಮ್‌ ಇಂಡಿಯಾದ ಗಮನವು ಕೇವಲ ಟಿ20 ಸರಣಿಯ ಮೇಲೆ ಮಾತ್ರ ಅದರಂತೆ ಎಲ್ಲ ಆಟಗಾರರಿಗೂ ಮುಂದಿನ ಎರಡು ವಾರಗಳ ಕಾಲ ದೇಶಕ್ಕಾಗಿ ಆಡುವತ್ತ ಗಮನ ಹರಿಸುವಂತೆ ತಿಳಿಸಲಾಗಿದೆ ಎಂದು ರೋಹಿತ್‌ ಹೇಳಿದರು.

ಇದನ್ನೂ ಓದಿ:ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದವರಿಗೆ ಖಡಕ್ ಉತ್ತರ ನೀಡಿದ ನಾಯಕ ರೋಹಿತ್ ಶರ್ಮಾ

ಪ್ರತಿಯೊಬ್ಬ ಆಟಗಾರನು ವೃತ್ತಿಪರ ಮತ್ತು ತನ್ನ ಕರ್ತವ್ಯವನ್ನು ತಿಳಿದಿದ್ದಾನೆ. ಟೀಮ್‌ ಇಂಡಿಯಾದಲ್ಲಿರುವ ಆಟಗಾರರಿಗೆ ಐಪಿಎಲ್‌ ಪಾತ್ರದ ಪ್ರಕಾರ ವೇತನ ನೀಡಲಾಗುತ್ತಿಲ್ಲ. ಹೀಗಾಗಿ ಐಪಿಎಲ್‌ಗಾಗಿ ಅಲ್ಲ, ದೇಶಕ್ಕಾಗಿ ಆಡುವುದರತ್ತ ಗಮನ ಹರಿಸುವಂತೆ ಸಲಹೆ ನೀಡಿರುವುದಾಗಿ ರೋಹಿತ್‌ ಶರ್ಮಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next