Advertisement

ಐಪಿಎಲ್‌ : ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಕೆಕೆಆರ್‌

11:21 PM Mar 26, 2022 | Team Udayavani |

ಕೆಕೆಆರ್‌ ನಾಯಕ ಶ್ರೇಯಸ್‌ ಅಯ್ಯರ್‌ 2022ನೇ ಐಪಿಎಲ್‌ ಋತುವಿನ ಮೊದಲ ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಅಯ್ಯರ್‌ ಜತೆಗೆ ಅಜಿಂಕ್ಯ ರಹಾನೆ ಮತ್ತು ವಿಕೆಟ್‌ ಕೀಪರ್‌ ಸ್ಯಾಮ್‌ ಬಿಲ್ಲಿಂಗ್ಸ್‌ ಮೊದಲ ಸಲ ಕೆಕೆಆರ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

ಸ್ಟಾರ್‌ ಓಪನರ್‌ ಫಾ ಡು ಪ್ಲೆಸಿಸ್‌ ಗೈರಲ್ಲಿ ಡೇವನ್‌ ಕಾನ್ವೆ ಚೆನ್ನೈ ಓಪನರ್‌ ಆಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಸಲ ಒಂದೂ ಪಂದ್ಯವಾಡದ ಮಿಚೆಲ್‌ ಸ್ಯಾಂಟ್ನರ್‌ ಈ ಬಾರಿ ಮೊದಲ ಪಂದ್ಯದಲ್ಲೇ ಅವಕಾಶ ಪಡೆದಿದ್ದಾರೆ. ಮೊಯಿನ್‌ ಅಲಿ ಕ್ವಾರಂಟೈನ್‌ನಲ್ಲಿರುವುದರಿಂದ ವಿದೇಶಿ ಆಟಗಾರನ ಕೋಟಾ ಸ್ಯಾಂಟ್ನರ್‌ ಪಾಲಾಯಿತು.

ಇದನ್ನೂ ಓದಿ :2022ರ ಐಪಿಎಲ್‌ ಸಂಭ್ರಮಕ್ಕೆ ಕ್ಷಣಗಣನೆ: ಇತಿಹಾಸ ಚೆನ್ನೈ ಪರ

ಆಡುವ ಬಳಗ
ಕೆಕೆಆರ್‌: ವೆಂಕಟೇಶ ಅಯ್ಯರ್‌, ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌ (ನಾಯಕ), ನಿತೀಶ್‌ ರಾಣಾ, ಸ್ಯಾಮ್‌ ಬಿಲ್ಲಿಂಗ್ಸ್‌ (ವಿ.ಕೀ.), ಆ್ಯಂಡ್ರೆ ರಸೆಲ್‌, ಸುನೀಲ್‌ ನಾರಾಯಣ್‌, ಶೆಲ್ಡನ್‌ ಜಾಕ್ಸನ್‌, ಉಮೇಶ್‌ ಯಾದವ್‌, ಶಿವಂ ಮಾವಿ, ವರುಣ್‌ ಚಕ್ರವರ್ತಿ.

ಚೆನ್ನೈ: ಋತುರಾಜ್‌ ಗಾಯಕ್ವಾಡ್‌, ಡೇವನ್‌ ಕಾನ್ವೇ, ರಾಬಿನ್‌ ಉತ್ತಪ್ಪ, ಅಂಬಾಟಿ ರಾಯುಡು, ರವೀಂದ್ರ ಜಡೇಜ (ನಾಯಕ), ಶಿವಂ ದುಬೆ, ಎಂ.ಎಸ್‌. ಧೋನಿ (ವಿ.ಕೀ.), ಡ್ವೇನ್‌ ಬ್ರಾವೊ, ಮಿಚೆಲ್‌ ಸ್ಯಾಂಟ್ನರ್‌, ಆ್ಯಂಡಂ ಮಿಲ್ನೆ, ತುಷಾರ್‌ ದೇಶಪಾಂಡೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next