Advertisement
ಮೇಲ್ನೋಟಕ್ಕೆ ಚೆನ್ನೈ ಈ ಪಂದ್ಯದ ನೆಚ್ಚಿನ ತಂಡ. ಶನಿವಾರದ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈಯನ್ನು ಮಣಿಸುವ ಮೂಲಕ ಧೋನಿ ಪಡೆ ಶುಭಾರಂಭ ಮಾಡಿದೆ. ಕಳೆದ ವರ್ಷದ ಫೈನಲ್ ಸೋಲಿಗೆ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿದೆ. ಯುವ ಪಡೆಯನ್ನೂ ನಾಚಿಸುವ ಸಾಮರ್ಥ್ಯ ತಮ್ಮದು ಎಂಬುದನ್ನು ಈ ಹಿರಿಯರ ಬಳಗ ಪ್ರಸಕ್ತ ಋತುವಿನಲ್ಲೂ ಸಾಬೀತುಪಡಿಸುವ ಸೂಚನೆಯೊಂದನ್ನು ರವಾನಿಸಿದೆ.
ನಿಜ, ರಾಜಸ್ಥಾನ್ ತಂಡದ ನಾಯಕ ಸ್ಟೀವನ್ ಸ್ಮಿತ್ ಇತ್ತೀಚಿನ ದಿನಗಳಲ್ಲಿ ಪೂರ್ತಿ ಫಿಟ್ನೆಸ್ ಹೊಂದಿಲ್ಲ. ಅಲ್ಲದೆ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಮತ್ತೋರ್ವ ಪ್ರಮುಖ ಆಟಗಾರ ಜಾಸ್ ಬಟ್ಲರ್ ಆಗಮಿಸಿದರೂ ಅವರ ಕ್ವಾರಂಟೈನ್ ಅವಧಿ ಮುಗಿದಿಲ್ಲ. ಈ ಮೂರು ವಿದೇಶಿ ಕ್ರಿಕೆಟಿಗರ ಸಮಸ್ಯೆಗಳನ್ನು ನಿಭಾಯಿಸುವುದರ ಮೇಲೆ ರಾಜಸ್ಥಾನ್ ಯಶಸ್ಸು ಅಡಗಿದೆ.
ಉಳಿದಂತೆ ಫಾರಿನ್ ಕ್ರಿಕೆಟಿಗರ ಯಾದಿಯಲ್ಲಿ ಗೋಚರಿಸುವ ಪ್ರಮುಖರೆಂದರೆ ಆ್ಯಂಡ್ರೂ ಟೈ, ಜೋಫ್ರ ಆರ್ಚರ್, ಡೇವಿಡ್ ಮಿಲ್ಲರ್, ಟಾಮ್ ಕರನ್ ಮತ್ತು ಒಶೇನ್ ಥಾಮಸ್. 4 ಮಂದಿ ವಿದೇಶಿಗರ ಆಯ್ಕೆ ತುಸು ಜಟಿಲವಾಗಬಹುದು.
Related Articles
Advertisement
ಚೆನ್ನೈ ಓಪನಿಂಗ್ ವೈಫಲ್ಯಚೆನ್ನೈ ಮೊದಲ ಪಂದ್ಯವನ್ನು ಗೆದ್ದರೂ ಓಪನಿಂಗ್ ಕೈಕೊಟ್ಟಿದೆ. ಮುರಳಿ ವಿಜಯ್, ಶೇನ್ ವಾಟ್ಸನ್ ಒಟ್ಟು ಸೇರಿ ಗಳಿಸಿದ್ದು ಐದೇ ರನ್. ಆದರೆ ಅಂಬಾಟಿ ರಾಯುಡು-ಫಾ ಡು ಪ್ಲೆಸಿಸ್ ಸಿಡಿದು ನಿಲ್ಲುವ ಮೂಲಕ ಮುಂಬೈಗೆ ನೀರು ಕುಡಿಸಿದರು. ಸ್ಯಾಮ್ ಕರನ್ ಆಲ್ರೌಂಡ್ ಶೋ ಮೂಲಕ ಬ್ರಾವೊ ಸ್ಥಾನವನ್ನು ತುಂಬಬಲ್ಲ ಸೂಚನೆ ನೀಡಿದ್ದಾರೆ. ಗೆಲುವಿನ ಲಯದಲ್ಲಿ ಮುಂದುವರಿಯುವುದು ನಮ್ಮ ಯೋಜನೆ ಎಂದಿದ್ದಾರೆ ಧೋನಿ.