Advertisement

ಐಪಿಎಲ್‌: ವೇಗಿ ಸೌಥಿಗೆ ವಾಗ್ಧಂಡನೆ

06:00 AM May 19, 2018 | Team Udayavani |

ಬೆಂಗಳೂರು: ಆರ್‌ಸಿಬಿ ವೇಗದ ಬೌಲರ್‌ ಟಿಮ್‌ ಸೌಥಿಗೆ ಐಪಿಎಲ್‌ ರೆಫ್ರಿ ವಾಗ್ಧಂಡನೆ ವಿಧಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಮೈದಾನ’ದಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ ಅವರು ಅಶಿಸ್ತಿನ ವರ್ತನೆ ತೋರಿದ್ದಾರೆಂದು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಯಾವ ತಪ್ಪು ಎನ್ನುವುದನ್ನು ಖಚಿತಪಡಿಸಿಲ್ಲ. 

Advertisement

ಊಹೆಗಳ ಪ್ರಕಾರ ಟಿಮ್‌ ಸೌಥಿ, ಟಿವಿ ತೀರ್ಪುಗಾರರ ನಿರ್ಧಾರವನ್ನು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದಕ್ಕೆ ಈ ಕ್ರಮ ಎನ್ನಲಾಗಿದೆ. ಅವರು ಹೈದರಾಬಾದ್‌ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌ ಕ್ಯಾಚ್‌ ಪಡೆದಿದ್ದರು. ಅದನ್ನು ಮೈದಾನದ ಅಂಪಾಯರ್‌ ಪರಿಗಣಿಸಿದ್ದರೂ ತೃತೀಯ ಅಂಪಾಯರ್‌ ತಿರಸ್ಕರಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಸೌದಿ, “ನಾನು ಆ ಕ್ಯಾಚನ್ನು ಸ್ಪಷ್ಟವಾಗಿ ಹಿಡಿದಿದ್ದೆ. ಆದರೆ ಟಿವಿಯಲ್ಲಿ ಅದು ಕೆಟ್ಟದಾಗಿ ಕಂಡಿತ್ತು ಅಷ್ಟೇ. ಏನಾದರೂ ಅದು ತೃತೀಯ ಅಂಪಾಯರ್‌ ನಿರ್ಧಾರ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next