Advertisement

ಐಒಬಿ ಹಗರಣ: ಮಧ್ಯವರ್ತಿ ಬಂಧನ

09:45 AM Jan 27, 2018 | Team Udayavani |

ಸುರತ್ಕಲ್‌: ಕುಳಾಯಿ ಐಒಬಿ ಬ್ಯಾಂಕಿನ ರಾಜ್ಯ ಸರಕಾರಿ ಸ್ವಾಮ್ಯದ ಕೆಆರ್‌ಐಡಿಎಲ್‌ನ ಬ್ಯಾಂಕ್‌ ಠೇವಣಿ ಖಾತೆಯಿಂದ 55 ಕೋ.ರೂ. ವರ್ಗಾವಣೆ ಸಂಬಂಧಿಸಿ ಮಧ್ಯವರ್ತಿ, ಮುಂಬಯಿ ಮೂಲದ ಅಮಿತ್‌ ದವೆ(38)ಯನ್ನು ಸುರ ತ್ಕಲ್‌  ಪೊಲೀಸರು  ಬಂಧಿಸಿ  ಕೋರ್ಟಿಗೆ ಹಾಜರುಪಡಿಸಿದ್ದಾರೆ. 

Advertisement

ಕುಳಾಯಿ ಐಒಬಿ ಶಾಖೆಯಿಂದ 2017ರ ಅ.24 ಮತ್ತು  30 ರಂದು ಒಟ್ಟು 55 ಕೋ.ರೂ. ಬೇನಾಮಿ ಖಾತೆಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು. ಬಳಿಕ ಬ್ಯಾಂಕಿನ ಅ ಧಿಕಾರಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿತ್ತು. ಆರೋಪಿಗಳ ಜತೆ ನಿಕಟ ಸಂಬಂಧ  ಹೊಂದಿದ್ದ  ವ್ಯಕ್ತಿಯ  ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಮುಂಬಯಿ  ಪೊಲೀಸರ ಗಮನಕ್ಕೆ ತಂದಿದ್ದರು. ಇದರಂತೆ ಎಮಿಗ್ರೇಷನ್‌ ಪೊಲೀಸರು ಅಮಿತ್‌ ದವೆಯನ್ನು ಕರ್ನಾಟಕ  ಪೊಲೀಸರಿಗೆ ಹಸ್ತಾಂತರಿಸಿದ್ದರು.  ಈತನನ್ನು ಒಂದು ವಾರ ಕಾಲ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದು ಫೆ.3ರ ವರೆಗೆ ನ್ಯಾಯಾಂಗ ಬಂಧನ ವಿ ಸಲಾಗಿದೆ. 

ಈಗಾಗಲೇ  ಸಿಬಿಐ ವಿಚಾರಣೆ ಎದುರಿಸುತ್ತಿರುವ ಚೆನ್ನೈ ಮೂಲದ ವ್ಯಕ್ತಿ ಮತ್ತು ಕೋಲ್ಕತಾದ ವ್ಯಕ್ತಿ ಬಗ್ಗೆ ಈತ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.  ಹಗರಣದಲ್ಲಿ ಭಾಗಿಯಾದವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಇದುವರೆಗೂ  ಹಣದ ಬಗ್ಗೆ  ಸರಿಯಾದ ಸುಳಿವು ಲಭಿಸಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next