Advertisement

INX ಮೀಡಿಯಾ ಕೇಸ್; ಬುಧವಾರದವರೆಗೆ ಚಿದಂಬರಂ ಬಂಧಿಸಬೇಡಿ; ಇ.ಡಿಗೆ ಸುಪ್ರೀಂಕೋರ್ಟ್

09:34 AM Aug 28, 2019 | Nagendra Trasi |

ನವದೆಹಲಿ:ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರನ್ನು ಬುಧವಾರದವರೆಗೆ ಬಂಧಿಸದಂತೆ ಸುಪ್ರೀಂಕೋರ್ಟ್ ಮಂಗಳವಾರ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.

Advertisement

ಐಎನ್ ಎಕ್ಸ್ ಪ್ರಕರಣದಲ್ಲಿ ಕಸ್ಟಡಿ ವಿಧಿಸಿದ್ದನ್ನು ಪ್ರಶ್ನಿಸಿ ಸೇರಿದಂತೆ ಎರಡು ಅರ್ಜಿಯನ್ನು ಚಿದಂಬರಂ ಪರ ವಕೀಲರು ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ನ ಜಸ್ಟೀಸ್ ಆರ್ ಭಾನುಮತಿ ಮತ್ತು ಜಸ್ಟೀಸ್ ಎಎಸ್ ಬೋಪಣ್ಣ ಅವರನ್ನೊಳಗೊಂಡ ಪೀಠ ಜಾರಿ ನಿರ್ದೇಶನಾಲಯ ಎರಡು ಅರ್ಜಿ ಕುರಿತು ಮಂಡಿಸಿದ್ದ ವಾದವನ್ನು ಆಲಿಸಿತ್ತು.

ಚಿದಂಬರಂ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು. ಜಾರಿ ನಿರ್ದೇಶನಾಲಯದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next