Advertisement

ಐಎನ್‌ಎಕ್ಸ್‌ ಪ್ರಕರಣ: ಇಂದು ಚಿದಂಬರಂ ತೀರ್ಪು ಪ್ರಕಟ

10:09 AM Sep 13, 2019 | Team Udayavani |

ನವದೆಹಲಿ: ಐಎನ್‌ಎಕ್ಸ್‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಶರಣಾಗುವ ವಿಚಾರಕ್ಕೆ ಸಂಬಂಧಿಸಿದ ತೀರ್ಪನ್ನು ನವದೆಹಲಿಯ ವಿಶೇಷ ಕೋರ್ಟ್‌ ಶುಕ್ರವಾರ ಪ್ರಕಟಿಸಲಿದೆ. ಸದ್ಯ ಅವರು ತಿಹಾರ್‌ ಜೈಲಿನಲ್ಲಿದ್ದಾರೆ. ಇ.ಡಿ. ಪರವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಮಾಜಿ ಸಚಿವರ ಬಂಧನ ಅಗತ್ಯವಾಗಿದೆ ಎಂದು ಅರಿಕೆ ಮಾಡಿದರು. ಸದ್ಯ ಅವರು ಸಿಬಿಐ ದಾಖಲಿಸಿದ ಕೇಸಿನಲ್ಲಿ ನ್ಯಾಯಾಂಗ ವಶದಲ್ಲಿದ್ದಾರೆ. ಹೀಗಾಗಿ ಅವರು ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇಲ್ಲವೆಂದರು.

Advertisement

ಚಿದು ಪರ ವಾದಿಸಿದ ಕಪಿಲ್‌ ಸಿಬಲ್‌ “ನನ್ನ ಕಕ್ಷಿದಾರ ನರಳುವಂತೆ ಮಾಡಬೇಕು ಎನ್ನುವುದೇ ಜಾರಿ ನಿರ್ದೇಶನಾಲಯದ ದುರುದ್ದೇಶ’ ಎಂದು ದೂರಿದ್ದಾರೆ.

ಮನೆ ಊಟಕ್ಕೆ ನಕಾರ:
ಇದೇ ವೇಳೆ, ಸಿಬಲ್‌ ಜೈಲಿನಲ್ಲಿ ಚಿದುಗೆ ಮನೆಯೂಟ ಒದಗಿಸಲು ಅನುಮತಿ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶ “ಜೈಲಿನಲ್ಲಿ ಎಲ್ಲರಿಗೆ ನೀಡುವ ಆಹಾರವನ್ನೇ ನಿಮಗೂ ನೀಡಲಾಗುತ್ತದೆ’ ಎಂದರು. ಅದಕ್ಕೆ ವಕೀಲ ಕಪಿಲ್‌ ಸಿಬಲ್‌ “ಅವರಿಗೆ 74 ವರ್ಷ ವಯಸ್ಸಾಗಿದೆ’ ಎಂದರು. ಅದಕ್ಕೆ ಉತ್ತರಿಸಿದ ಸಾಲಿಸಿಟರ್‌ ಜನರಲ್‌ “ಐಎನ್‌ಎಲ್‌ಡಿ ನಾಯಕ ಓಂ ಪ್ರಕಾಶ್‌ ಚೌಟಾಲಾಗೆ ಕೂಡ ವಯಸ್ಸಾಗಿದೆ. ಅವರೂ ಕೈದಿಯೇ. ಯಾರಿಗೂ ತಾರತಮ್ಯ ಮಾಡಲಾಗದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next