Advertisement

Koppal ನಾಳೆ ಬೆಂಗಳೂರಿನಲ್ಲಿ ಮಾತುಕತೆಗೆ ಅಹ್ವಾನ: ಸಂಗಣ್ಣ

11:40 PM Mar 22, 2024 | Team Udayavani |

ಕೊಪ್ಪಳ: ಟಿಕೆಟ್‌ ಕೈ ತಪ್ಪಿದ ವಿಚಾರಕ್ಕೆ ನನಗೇನೂ ನೋವಿಲ್ಲ. ಎಂಟೂ ಕ್ಷೇತ್ರದ ಜನರಿಗೆ ಆಗಿರುವ ಅನ್ಯಾಯದ ಕುರಿತು ವೇದನೆ ವ್ಯಕ್ತಪಡಿಸಿದ್ದಾರೆ. ಅದನ್ನು ನಾನು ನಾಯಕರಿಗೆ ತಿಳಿಸಿದ್ದೇನೆ. ಮಾ.24ರಂದು ಬೆಂಗಳೂರಿಗೆ ಮಾತುಕತೆಗೆ ಕರೆದಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

Advertisement

ನನ್ನ ಜತೆಗೆ ಹಲವು ನಾಯಕರು ಮಾತನಾಡಿ ದ್ದಾರೆ. ಮಾ.24ರಂದು ನಡೆಯುವ ಮಾತುಕತೆಗೆ 8 ಕ್ಷೇತ್ರಗಳ ಪ್ರಮುಖ ನಾಯಕ ರನ್ನೂ ಕರೆದುಕೊಂಡು ಹೋಗುತ್ತೇನೆ. ಸಭೆಯಲ್ಲಿ ಬಿಎಸ್‌ವೈ, ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್‌.ಅಶೋಕ್‌, ಬೊಮ್ಮಾಯಿ ಇದ್ದರೆ ಮಾತ್ರ ಬರುವೆ ಎಂದು ಹೇಳಿದ್ದೇನೆ. ಒಂದು ವೇಳೆ ಅವರ್ಯಾರೂ ಇರದಿದ್ದರೆ ನಾನು ತೆರಳುವುದಿಲ್ಲ. ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನನ್ನನ್ನು ಪ್ರೀತಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ನನಗೆ ಆಹ್ವಾನ ನೀಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವೆ. ಆದರೆ ನಾನು ಅವರ ಆಹ್ವಾನ ತಿರಸ್ಕರಿಸುತ್ತೇನೆ ಎಂದರು.

ಅರವಿಂದ ಬೆಲ್ಲದ ಭೇಟಿ
ಸಂಗಣ್ಣ ಅವರನ್ನು ಸಮಾಧಾನ ಮಾಡಲು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಶುಕ್ರವಾರ ಸಂಸದರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಸಂಸದರು ನಾಲ್ಕು ದಿನ ಕಾದು ನೋಡುವೆ ಎಂದಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ರಾಜ್ಯ ನಾಯಕರು ಸಂಸದರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ. ಗುರುವಾರ ರಾತ್ರಿ ಎಂಎಲ್‌ಸಿ ರವಿಕುಮಾರ ಭೇಟಿ ನೀಡಿ ಸಂಸದರ ಜತೆ ಮಾತುಕತೆ ನಡೆಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next