Advertisement

ಮಂಗಗಳ ಹತ್ಯೆ: ತನಿಖೆ ಚುರುಕು

12:21 AM Aug 01, 2021 | Team Udayavani |

ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಚೌಡೇನಹಳ್ಳಿ ಬಳಿ ಮಂಗಗಳ  ಕಳೇಬರ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲಾಡಳಿತ ತನಿಖೆ ತೀವ್ರಗೊಳಿಸಿದೆ.

Advertisement

ಗುರುವಾರ ರಾತ್ರಿ 35ರಿಂದ  40 ಮಂಗಗಳ ಕಳೇಬರ ಚೌಡೇನಹಳ್ಳಿ ಬಳಿ ಪತ್ತೆಯಾಗಿದ್ದವು.  ಈ ಸಂಬಂಧ ಹೈಕೋರ್ಟ್‌ ಸ್ವಯಂ

ಪ್ರೇರಿತ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆ.4ರೊಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್‌. ಗಿರೀಶ್‌,  ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಆರ್‌. ಶ್ರೀನಿವಾಸ ಗೌಡ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ  ಮಾಹಿತಿ ಸಂಗ್ರಹಿಸಿದರು.

ತ್ವರಿತ ಪತ್ತೆಗೆ ಕ್ರಮ:

ಮಂಗಗಳ ಮೃತದೇಹಗಳ ಮಾದರಿಯನ್ನು ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.  ಪೊಲೀಸ್‌ ಮತ್ತು ಅರಣ್ಯ ಇಲಾಖೆ  ಈಗಾಗಲೇ ಜಂಟಿ ತನಿಖೆ ಆರಂಭಿಸಿವೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ  ತನಿಖಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಜಿಲ್ಲಾಧಿಕಾರಿ ತಿಳಿಸಿದರು.

Advertisement

ಆಸ್ಪತ್ರೆ ಸಮೀಪ ಕೋತಿಗಳು ಕಣ್ಮರೆ :

ಬೇಲೂರಿನ ಸಾರ್ವಜನಿಕ ಆಸ್ಪತ್ರೆ ಸಮೀಪ ಕಂಡು ಬರುತ್ತಿದ್ದ ಕೋತಿಗಳು ಕೆಲವು ದಿನಗಳಿಂದ ಕಣ್ಮರೆಯಾಗಿವೆ ಎಂದು  ಕೆಲವರು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಅಲ್ಲಿಗೆ ಹೋಗಿ ಮಾಹಿತಿ ಸಂಗ್ರಹಿಸುವಂತೆ  ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next