Advertisement

ಕುಂದಾಪುರ: ಆಯುರ್ವೇದ ಚಿಕಿತ್ಸೆ ವೈದ್ಯರಿಂದ ಅಲೋಪತಿ ಔಷಧ; ಕ್ಲಿನಿಕ್‌ಗಳ ವಿರುದ್ಧ ತನಿಖೆ

07:49 PM Jun 09, 2022 | Team Udayavani |

ಕುಂದಾಪುರ: ಆಯುರ್ವೇದ ವೈದ್ಯಕೀಯ ಚಿಕಿತ್ಸೆ ನೀಡಬೇಕಾದ ವೈದ್ಯರು ಅಲೋಪತಿ ಔಷಧ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ 11 ಮಂದಿ ವೈದ್ಯರ ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಲಾಗಿದೆ.

Advertisement

ಕುಂದಾಪುರದ ಸಾಮಾಜಿಕ ಕಾರ್ಯಕರ್ತ ಕಿರಣ್‌ ಪೂಜಾರಿ ನೀಡಿದ ದೂರಿನನ್ವಯ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್‌ ಉಡುಪ ಅವರು ತನಿಖೆಗೆ ಆದೇಶಿಸಿದ್ದಾರೆ.

ಅದರಂತೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ 11 ಮಂದಿಯ ಕ್ಲಿನಿಕ್‌ ವಿರುದ್ಧ ದೂರು ದಾಖಲಾಗಿದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಆದೇಶ ನೀಡಿದ್ದರು. ಇದಾದ ಬಳಿಕ ತಾಲೂಕು ಪ್ರಾಧಿಕೃತ ಅಧಿಕಾರಿಗಳ ನೇತೃತ್ವದ ತಂಡ 11 ಕ್ಲಿನಿಕ್‌ಗಳಲ್ಲಿ ತನಿಖೆ ನಡೆಸಿದೆ. ಈ ಪೈಕಿ 7 ಕ್ಲಿನಿಕ್‌ಗಳ ಮೇಲೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next