Advertisement

“ಅನ್ಯ ರಾಜ್ಯಕ್ಕೆ ಹೂಡಿಕೆ: ಕಾಂಗ್ರೆಸ್‌ ದುರಾಡಳಿತ’; ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

08:33 PM May 24, 2024 | Team Udayavani |

ಬೆಂಗಳೂರು : ಸ್ಮಾರ್ಟ್‌ಫೋನ್ಸ್‌ ಹಾಗೂ ಡ್ರೋನ್‌ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಗೂಗಲ್‌ ಸಂಸ್ಥೆ ಕರ್ನಾಟಕದ ಬದಲು ತಮಿಳುನಾಡನ್ನು ಆಯ್ಕೆಮಾಡಿಕೊಂಡಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ದುರಾಡಳಿತವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣ “ಎಕ್ಸ್‌’ನಲ್ಲಿ ಗೂಗಲ್‌ ಹೂಡಿಕೆಗೆ ತಮಿಳುನಾಡನ್ನು ಆಯ್ಕೆ ಮಾಡಿಕೊಂಡಿರುವ ಪತ್ರಿಕಾ ವರದಿಯನ್ನು ಹಂಚಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ” ನಿದ್ರಾವಶವಾಗಿರುವ ಸೋಮಾರಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣವಾಗಿ ಗೊತ್ತು ಗುರಿ ಇಲ್ಲದೇ ಆಡಳಿತ ನಡೆಸುತ್ತಿರುವುದರ ನೇರ ಪರಿಣಾಮ ರಾಜ್ಯದ ಮೇಲಾಗುತ್ತಿದೆ. ನರೇಂದ್ರ ಮೋದಿ ಸರ್ಕಾರ ದೇಶಕ್ಕೆ ಹೂಡಿಕೆದಾರರನ್ನು ಸೆಳೆಯುತ್ತಿದ್ದರೆ, ರಾಜ್ಯ ಸರ್ಕಾರ ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿ ಕರ್ನಾಟಕವನ್ನು ಹೂಡಿಕೆದಾರರ ಸ್ವರ್ಗವಾಗಿಸುವಲ್ಲಿ ಗಣನೀಯ ವೈಫ‌ಲ್ಯ ಕಂಡಿದೆ ಎಂದು ದೂರಿದ್ದಾರೆ.

ಇದೇ ಕಾಂಗ್ರೆಸ್‌ ಸರ್ಕಾರ ಈ ಹಿಂದೆ ತನ್ನ ರಾಷ್ಟ್ರೀಯ ಒಕ್ಕೂಟದ ಭಾಗಿದಾರ ಪಕ್ಷ ಡಿಎಂಕೆಯ ಹಿತ ರಕ್ಷಣೆ ಮಾಡುವುದಕ್ಕಾಗಿ ಕಾವೇರಿ ವಿಚಾರದಲ್ಲಿ ರಾಜ್ಯದ ಪರ ನಿಂತಿರಲಿಲ್ಲ. ಬಹುಕೋಟಿ ಮೊತ್ತದ ಹೂಡಿಕೆ ತಮಿಳುನಾಡಿಗೆ ಹರಿದು ಹೋಗಿರುವುದರ ಹಿಂದೆ ಇದೇ ಉದ್ದೇಶವಿದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next