Advertisement

ಮೂವರು ಅಂತಾರಾಜ್ಯ ಸುಲಿಗೆಕೋರರ ಬಂಧನ  

08:10 PM Oct 19, 2021 | Team Udayavani |

ಚಿಕ್ಕೋಡಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಟ್ರಕ್‌ ಮತ್ತು ಕಂಟೇನರ್‌ಗಳನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಅಂತಾರಾಜ್ಯ ಸುಲಿಗೆಕೋರರನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಟೈರ್‌ ತುಂಬಿಕೊಂಡು ಚೆನ್ನೈನಿಂದ ಮುಂಬೆ„ಗೆ ತೆರಳುತ್ತಿದ್ದ ಟ್ರಕ್‌ ಚಾಲಕನಿಗೆ ನಿದ್ರೆ ಮಾತ್ರೆ ನೀಡಿ ಟೈರ್‌ಗಳನ್ನು ಕಳುವು ಮಾಡಿದ ಆರೋಪದಡಿ ಹರಿಯಾಣದ ಝಾರೋಖಡಿ ಗ್ರಾಮದ ಅಬೀದ್‌ ಜುಮ್ಮೇಖಾನ್‌ (32), ರಾಜಸ್ತಾನದ ಪಾಡೀನ್‌ ಗ್ರಾಮದ, ಹಾಲಿ ಚಿತ್ರದುರ್ಗದ ಚಳ್ಳಕೆರೆ ನಿವಾಸಿ ಅಶ್ವಿ‌ನ್‌ ಶಾಂತಿಲಾಲ್‌ ಜೈನ್‌ (42), ಉತ್ತರ ಪ್ರದೇಶದ ಬಿಸೆಂಬರಾ ನಿವಾಸಿ ರಿಜ್ವಾನ್‌ ನುರೂದ್ದೀನ್‌ ಬಿಸೆಂಬರಾ (22) ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 35 ಲಕ್ಷ ರೂ. ಮೌಲ್ಯದ ಟೈರ್‌ ಗಳು ಮತ್ತು 25 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ಬಿಕಿಟ್‌ ವಶಪಡಿಸಿಕೊಳ್ಳಲಾಗಿದೆ. ಟೈರ್‌ ತುಂಬಿಕೊಂಡು ಬರುತ್ತಿದ್ದ ಟ್ರಕ್‌ ಚಾಲಕನಿಗೆ ನಿದ್ರೆ ಮಾತ್ರೆ ನೀಡಿ, ಆತ ನಿದ್ರೆಯ ಮಂಪರಿನಲ್ಲಿದ್ದಾಗ ಟೈರ್‌ ತುಂಬಿದ್ದ ಟ್ರಕ್‌ ಕಳುವು ಮಾಡಿರುವ ಕುರಿತು ಮಹಾರಾಷ್ಟ್ರದ ಅನುಸಿಂಗ್‌ ಜಯಚಂದ್ರಸಿಂಗ್‌ ಎಂಬುವವರು ಚಿಕ್ಕೋಡಿ ಪೊಲೀಸ್‌ ಠಾಣೆಯಲ್ಲಿ ಅ.10 ರಂದು ನೀಡಿದ ದೂರಿನನ್ವಯ ಎಸ್ಪಿ, ಎಡಿಎಸ್ಪಿ ಅವರ ಮಾರ್ಗದರ್ಶನ ಮತ್ತು ಇಲ್ಲಿನ ಡಿವೈಎಸ್ಪಿ ಅವರ ನೇತೃತ್ವದಲ್ಲಿ ಸಿಪಿಐ ಆರ್‌.ಆರ್‌.ಪಾಟೀಲ ಮತ್ತು ಸಿಬ್ಬಂದಿಗಳ ತಂಡ ತನಿಖೆ ಕೈಗೊಂಡು ಆರೋಪಿತರನ್ನು ಬಂ ಧಿಸುವಲ್ಲಿ ಯಶಸ್ವಿಯಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next